ಇಂದು ಪುಣ್ಯಸ್ಮರಣೆ
ಭಾರತೀಯ ನವೋದಯದ ಪಿತಾಮಹ ಎಂದೇ ಕರೆಯಲ್ಪಡುವ ರಾಜಾ ರಾಮಮೋಹನ್ ರಾಯ್ ಅವರು ಸಮಾಜ ಸುಧಾರಕರು, ಧಾರ್ಮಿಕ ತತ್ವಜ್ಞಾನಿ ಮತ್ತು ವಿದ್ವಾಂಸರಾಗಿದ್ದರು. ರಾಜಕೀಯ, ಸಾರ್ವಜನಿಕ ಆಡಳಿತ , ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ಇವರು ಸತಿ ಪದ್ಧತಿ, ಬಾಲ್ಯವಿವಾಹ ವಿರುದ್ಧ ಹೋರಾಡಿದವರು. ಇಂದು ಅವರ ಪುಣ್ಯಸ್ಮರಣೆ.
ಪರಿಚಯ
ರಾಜಾ ರಾಮಮೋಹನ್ ರಾಯ್ ಅವರು ಮೇ  22 , 1772 ಬಂಗಾಳ ಪ್ರೆಸಿಡೆನ್ಸಿಯ ಹೂಗ್ಲಿ ಜಿಲ್ಲೆಯ ರಾಧಾನಗರದಲ್ಲಿ ಜನಿಸಿದರು. ಇವರು ಧಾರ್ಮಿಕ ತತ್ತ್ವಶಾಸ್ತ್ರವನ್ನು ಹೊಂದಿದವರು. ಇವರು ಬಂಗಾಳಿ ಮತ್ತು ಸಂಸ್ಕೃತದಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದರು. ನಂತರ ಪರ್ಷಿಯನ್‌ ಮತ್ತು ಅರೇಬಿಕ್‌ ಭಾಷೆ ಕಲಿಯಲು ಪಾಟ್ನಾಗೆ ತೆರಳಿ ಇವರು ಧರ್ಮಗ್ರಂಥಗಳಾದ ವೇದಗಳು, ಉಪನಿಷತ್‌ ಗಳು ಕಲಿಯಲು ಪ್ರಾರಂಭಿಸಿದರು. ಅವರು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಪ್ರಭಾವಿತರಾದರು ಮತ್ತು ಧರ್ಮಗಳ ಏಕತೆ ಮತ್ತು ವೈಚಾರಿಕತೆಯ ಸಂದೇಶವನ್ನು ಹರಡಿದರು. ಭಾರತೀಯ ರಾಷ್ಟ್ರೀಯತೆಯ ಪುನರುತ್ಥಾನಕ್ಕೆ ಸಹಾಯ ಮಾಡಿದರು. ರಾಜಾರಾಮಮೋಹನ್ ಯುರೋಪಿಯನ್ನರ ಜನಾಂಗೀಯ ಶ್ರೇಷ್ಠತೆಯನ್ನು ವಿರೋಧಿಸಿದರು. ಜನರ ನಾಗರಿಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು.
ಅವರು 22ನೇ ವಯಸ್ಸಿನಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿತರು. ನಂತರ ಯೂಕ್ಲಿಡ್ ಮತ್ತು ಅರಿಸ್ಟಾಟಲ್ ಮುಂತಾದ ತತ್ವಜ್ಞಾನಿಗಳ ಕೃತಿಗಳನ್ನು ಓದಲು ಬಯಸಿದ್ದರು. ತಮ್ಮ ಅಧ್ಯಯನ ಅವರ ಆಧ್ಯಾತ್ಮಿಕ ಮತ್ತು ಧಾರ್ಮಿಕ ವಿಷಯದಲ್ಲಿ ಸ್ವಂತವಿಚಾರನ್ನು ರೂಪಿಸಲು ಸಹಕಾರಿಯಾಯಿತು.


ಸಾಮಾಜಿಕ ಸುಧಾರಣೆ
ರಾಜಾ ರಾಮಮೋಹನ್ ಅವರು ಬ್ರಹ್ಮ ಸಮಾಜವನ್ನು ಸ್ಥಾಪಿಸಿದರು. ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದರು. ‘ಸತಿ’ ಪದ್ಧತಿ, ಬಹುಪತ್ನಿತ್ವ, ಬಾಲ್ಯವಿವಾಹ, ಜಾತಿ-ವ್ಯವಸ್ಥೆ, ಅಸ್ಪೃಶ್ಯತೆ, ಪರ್ದಾ ಪದ್ಧತಿ ನಿರ್ಮೂಲನೆಗೆ ಹೋರಾಡಿದರು. ಅವರು ಅಂತರ್ಜಾತಿ ವಿವಾಹಗಳು, ಮಹಿಳಾ ಶಿಕ್ಷಣ, ವಿಧವಾ ಪುನರ್ವಿವಾಹಗಳು ಇತ್ಯಾದಿಗಳನ್ನು ಬೆಂಬಲಿಸಿದರು.


ಶೈಕ್ಷಣಿಕ ಸುಧಾರಣೆ
ರಾಜಾ ರಾಮಮೋಹನ್‌ ರಾಯ್‌ ಅವರು ಕೊಲ್ಕತ್ತಾದಲ್ಲಿ ಇಂಗ್ಲಿಷ್ ಶಾಲೆ, ಹಿಂದೂ ಕಾಲೇಜು ಮತ್ತು ವೇದಾಂತ ಕಾಲೇಜುಗಳನ್ನು ಪ್ರಾರಂಭಿಸಿದರು. ಅವರು ತರ್ಕಬದ್ಧ, ನೈತಿಕ, ನಿರಂಕುಶವಲ್ಲದ, ಈ-ಲೌಕಿಕ ಮತ್ತು ಸಮಾಜ-ಸುಧಾರಣಾ ಹಿಂದೂ ಧರ್ಮವನ್ನು ಪ್ರಚಾರ ಮಾಡಿದರು. ಅವರ ಬರಹಗಳು ಬ್ರಿಟಿಷ್ ಮತ್ತು ಅಮೇರಿಕನ್ ಯುನಿಟೇರಿಯನ್ನರಲ್ಲಿ ಆಸಕ್ತಿಯನ್ನು ಹುಟ್ಟುಹಾಕಿದವು.

ಈಸ್ಟ್‌ ಇಂಡಿಯಾ ಕಂಪನಿ ಆಡಳಿತದ ಆರಂಭದ ವರ್ಷಗಳಲ್ಲಿ ರಾಜಾರಾಮ ಮೋಹನ್‌ ರಾಯ್‌ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾಗ ರಾಜಕೀಯ ಚಳವಳಿಗಾರನಾಗಿ ಕಾರ್ಯನಿರ್ವಹಿಸಿದರು. ವಿಲಿಯಂ ಕ್ಯಾರಿ ನೆಲೆಸಲು ಭಾರತಕ್ಕೆ ಬಂದಿಳಿದರು. ಅಲ್ಲಿ ಭಾರತೀಯ ಜನರಿಗೆ ಕ್ರಿಶ್ಚಿಯನ್ ಧರ್ಮವನ್ನು ಪ್ರಚಾರ ಮಾಡುವುದು ಅವರ ಉದ್ದೇಶವಾಗಿತ್ತು.
ವಿಲಿಯಂ ಕ್ಯಾರಿ ಸಂಸ್ಕೃತ ವಿದ್ವಾಂಸರಾದ ತಾಂತ್ರಿಕ ಸಾಯಿಹರ್ದನ ವಿದ್ಯಾವಾಗೀಶ್ ಅವರೊಂದಿಗೆ ಸಂಪರ್ಕ ಬೆಳೆಸಿದರು. ಅವರು ನಂತರ ಇಂಗ್ಲಿಷ್ ಕಲಿಯಲು ಬಯಸಿದ ರಾಮ್ ಮೋಹನ್ ರಾಯ್ ಅವರಿಗೆ ಪರಿಚಯಿಸಿದರು. ರಾಮ್ ಮೋಹನ್ ಅವರು ಇಂಗ್ಲಿಷ್ ನ್ಯಾಯಾಲಯಗಳಲ್ಲಿ ಪಂಡಿತರಾಗಿ ತಮ್ಮ ವೃತ್ತಿಯನ್ನು ಮುಂದುವರೆಸಿದರು. ಅವರು ಗ್ರೀಕ್ ಮತ್ತು ಲ್ಯಾಟಿನ್ ಕಲಿಯಲು ಪ್ರಾರಂಭಿಸಿದರು
ರಾಜಾರಾಮ್‌ ಮೋಹನ್‌ ರಾಯ್‌ ಸೆಪ್ಟೆಂಬರ್‌ 27, 1833 ರಂದು 61ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.