
Kajampady Subramanya Bhat speaking
ಮಂಗಳೂರಿನ ಸಂಘನಿಕೇತನದಲ್ಲಿ ಸಂಘದ ಹಿರಿಯ ಪ್ರಚಾರಕರಾದ ಮಾನ್ಯ ನ. ಕೃಷ್ಣಪ್ಪ ಅವರಿಗೆ ಶ್ರದ್ಧಾಂಜಲಿ ಸಭೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಮಾನ್ಯ ನ. ಕೃಷ್ಣಪ್ಪರವರು 10-08-2015 ರ ಬೆಳಗ್ಗೆ 10.55 ಕ್ಕೆ ಬೆಂಗಳೂರಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಂದ್ರ ಕಛೇರಿ ಕೇಶವ ಕೃಪಾದಲ್ಲಿ ಸ್ವರ್ಗಸ್ಥರಾದರು. ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಮಂಗಳೂರಿನ ಸಂಘನಿಕೇತನದಲ್ಲಿ 12-08-2015 ರಂದು ಸಂಜೆ 6.30 ಕ್ಕೆ ಏರ್ಪಡಿಸ ಲಾಯಿತು.
ಈ ಸಭೆಯಲ್ಲಿ ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಪ್ರಮುಖರಾದ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್, ನಿಟ್ಟೆ ವಿದ್ಯಾಸಂಸ್ಥೆಯ ಶ್ರೀ ವಿನಯ್ ಹೆಗ್ಡೆ, ವಿಶ್ವ ಹಿಂದು ಪರಿಷತ್ನ ಶ್ರೀ ಎಂ. ಬಿ. ಪುರಾಣಿಕ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಡಾ. ವಾಮನ್ ಶೆಣೈ ಡಾ. ಸತೀಶ್ ರಾವ್, ಮಹಾನಗರ ಸಂಘಚಾಲಕರು ಹಾಗೂ ಅವರ ಒಡನಾಟದಲ್ಲಿದ್ದ ಹಿರಿಯರು, ಹಿತೈಷಿಗಳು ಭಾಗವಹಿ ಸಿದರು.