ಬೆಂಗಳೂರು: ರಾಷ್ಟ್ರೀಯ ಸೇವಾಭಾರತಿ ವತಿಯಿಂದ ವಿಪತ್ತು ನಿರ್ವಹಣೆಯ ಕುರಿತು ಪ್ರಕಟಿಸಲಾಗಿರುವ ‘ಸೇವಾಸಾಧನ’ ಕೃತಿಯನ್ನು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ಅವರಿಗೆ ರಾಷ್ಟ್ರೀಯ ಸೇವಾಭಾರತಿಯ ಮಂತ್ರಿ ಡಾ.ರಾಮ್ ಕುಮಾರ್, ಸೇವಾಭಾರತಿಯ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಮಂತ್ರಿ ಹಾಗೂ ಹಿಂದೂ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್, ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಘಟನಾ ಮಂತ್ರಿ ರಾಜೀವ್ ಕುಮಾರ್ ಅವರು ನೀಡಿದರು. ಸೇವಾಸಾಧನ ಪುಸ್ತಕ ರಾಷ್ಟ್ರಾದ್ಯಂತ ನಡೆದ ಹಲವು ವಿಪತ್ತು ನಿರ್ವಹಣಾ ಕಾರ್ಯಗಳ ಸಂದರ್ಭದಲ್ಲಿ ತಮ್ಮ ಜೀವನಪುಷ್ಪವನ್ನು ಕಳೆದುಕೊಂಡ ಸ್ವಯಂಸೇವಕರ ಕುರಿತಾದ ಕೃತಿಯಾಗಿದೆ‌.

Leave a Reply

Your email address will not be published.

This site uses Akismet to reduce spam. Learn how your comment data is processed.