ಝಾರ್ಖಂಡ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರು ದಿನಗಳ ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್ ರಾಂಚಿಯಲ್ಲಿ ಪ್ರಾರಂಭಗೊಂಡಿದೆ. ಜುಲೈ 14, 2024 ಸಂಜೆ 6ರ ವರೆಗೆ ಬೈಠಕ್ ನಡೆಯಲಿದೆ. ಬೈಠಕ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಎಲ್ಲಾ ಸಹ ಸರಕಾರ್ಯವಾಹರು, ಸಂಘದ ಎಲ್ಲಾ ಪ್ರಾಂತಗಳ ಪ್ರಾಂತ ಪ್ರಚಾರಕರು ಮತ್ತು ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು, ಎಲ್ಲಾ ಕಾರ್ಯವಿಭಾಗಗಳ ಅಖಿಲ ಭಾರತೀಯ ಅಧಿಕಾರಿಗಳು, ಸಂಘ ಪ್ರೇರಿತ ವಿವಿಧ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಮಂತ್ರಿಗಳು ಉಪಸ್ಥಿತರಿರಲಿದ್ದಾರೆ.

ಬೈಠಕ್ ನಲ್ಲಿ ಈ ವರ್ಷ ನಡೆದ ಸಂಘ ಶಿಕ್ಷಾ ವರ್ಗ, ಕಾರ್ಯಕರ್ತವಿಕಾಸ ವರ್ಗದ ಕುರಿತು ಅವಲೋಕನ, ಸಂಘದ ಶತಾಬ್ದಿ ವರ್ಷದ ನಿಮಿತ್ತ ಕೈಗೊಂಡ ಯೋಜನೆಗಳ ಪ್ರಸ್ತುತದ ಪ್ರಗತಿ, ಸಾಮಾಜಿಕ ಪರಿವರ್ತನೆಯ ಪಂಚ ವಿಷಯಗಳ ಅನುಭವಗಳ ವಿನಿಮಯ ಹಾಗೂ ವರ್ತಮಾನದ ಸ್ಥಿತಿ ಗತಿ ಕುರಿತು ಚರ್ಚೆ ನಡೆಯಲಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.