ಬೆಂಗಳೂರು: ಹಲವು ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹತ್ತಾರು ಶಾಲೆಗಳನ್ನು ನಡೆಸುತ್ತಿರುವ ಮಂಗಳ ಶಿಕ್ಷಾ ಸಮಿತಿಯ ಕಾರ್ಯದರ್ಶಿಯಾಗಿಯೂ ಸೇವೆಸಲ್ಲಿಸಿದ್ದ ಶ್ರೀಯುತ ಹೊ.ಭೈರಪ್ಪ ಅವರು ನಿಧನರಾಗಿದ್ದಾರೆ‌.

ಸಂತಾಪ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ ಸಂತಾಪ ಸೂಚಿಸಿದ್ದಾರೆ.

ತುಂಬಾ ಆಘಾತದ ಸುದ್ದಿ. ತೀವ್ರ ಸಂತಾಪಗಳು. ಅವರ ಗತಿಸಿದ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥನೆ. ಶಾಂತಿಃ॥

– ದತ್ತಾತ್ರೇಯ ಹೊಸಬಾಳೆ

ಸರಕಾರ್ಯವಾಹ, ರಾಷ್ಟ್ರೀಯ ಸ್ವಯಂಸೇವಕ ಸಂಘ

ದಿ. ಭೈರಪ್ಪ ಅವರ ನಿಧನ ಅತೀವ ಸಂತಾಪ ತಂದಿದೆ. ಅವರೊಬ್ಬ ಅತ್ಯುತ್ತಮ ಪ್ರಚಾರಕರಾಗಿದ್ದವರು. ಗೃಹಸ್ಥ ಜೀವನಕ್ಕೆ ಕಾಲಿಟ್ಟ ನಂತರವೂ ಸಂಘದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದವರು. ಮಂಗಳ ಶಿಕ್ಷಣ ಸಂಸ್ಥೆ ಗೆ ಜೀವತುಂಬಿದವರು. ಜೀವವಿಮಾ ನಿಗಮದ ಪ್ರತಿನಿಧಿಯಾಗಿ, ಮುಖ್ಯ ಪ್ರತಿನಿಧಿಯಾಗಿ ಮಾದರಿ ಎನ್ನಿಸಿಕೊಂಡವರು. ಪಾಲಿಸಿದಾರರ ಆದರ, ಗೌರವಕ್ಕೆ ಪಾತ್ರರಾಗಿದ್ದರು ಅವರಿಗೆ ನನ್ನ ಶ್ರದ್ಧಾಂಜಲಿಗಳು.

– ವಿ.ನಾಗರಾಜ್

ಕ್ಷೇತ್ರೀಯ ಸಂಘಚಾಲಕ, ರಾಷ್ಟ್ರೀಯ ಸ್ವಯಂಸೇವಕ ಸಂಘ

Leave a Reply

Your email address will not be published.

This site uses Akismet to reduce spam. Learn how your comment data is processed.