ಗ್ರಾಹಕ ಶೋಷಣೆಗೆ ಒಳಗಾಗದ ಕ್ಷೇತ್ರವಿಲ್ಲ. ಜಗತ್ತಿನಾದ್ಯಂತ ಪ್ರಯತ್ನಿಸಿದ ಬಂಡವಾಳಶಾಹಿ, ಕಮ್ಯುನಿಸಂ, ಸಮಾಜವಾದದಂತಹ ಎಲ್ಲಾ ಆರ್ಥಿಕ ವ್ಯವಸ್ಥೆಗಳು ಗ್ರಾಹಕರಿಗೆ ನ್ಯಾಯವನ್ನು ನೀಡುವಲ್ಲಿ ವಿಫಲವಾಗಿವೆ. ಆದ್ದರಿಂದ ಗ್ರಾಹಕರನ್ನು ಸಂಘಟಿಸಲು ಮತ್ತು ಹಿಂಸೆಗೆ ಒಳಗಾಗದೆ ಅನ್ಯಾಯವನ್ನು ವಿರೋಧಿಸಲು, ಅದರ ವಿರುದ್ಧ ಧ್ವನಿ ಎತ್ತಲು ಹಾಗು ಭ್ರಷ್ಟರು, ಮೋಸಗಾರರು ಮತ್ತು ಶೋಷಕರನ್ನು ಬಹಿಷ್ಕರಿಸಲು ನೈತಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಒದಗಿಸುವುದು ಅವಶ್ಯಕ. ABGP ಈ ದೇಶದಲ್ಲಿ ಈ ಸವಾಲಿನ ಪಾತ್ರವನ್ನು ವಹಿಸಿಕೊಂಡಿದೆ. ಅದಕ್ಕಾಗಿ ಶೋಷಣೆ ಮುಕ್ತ ಸಮಾಜದ ನಿರ್ಮಾಣ ಹಾಗು ನಮ್ಮ ದೇಶವನ್ನು “ಶೋಷಣ ಮುಕ್ತ ಭಾರತ” ಮಾಡುವುದೇ ABGP ಯ ಉದ್ದೇಶವಾಗಿದೆ.


ಪಾಶ್ಚಾತ್ಯ ಗ್ರಾಹಕ ವಾದವು ಅರ್ಥ ಮತ್ತು ಕಾಮವನ್ನು ಮಾತ್ರ ಆಧರಿಸಿದೆ ಮತ್ತು ಭಾರತೀಯ ತತ್ತ್ವಶಾಸ್ತ್ರವು ಧರ್ಮ ಮತ್ತು ಮೋಕ್ಷ ಎಂಬ ಎರಡು ಇತರ ಸ್ತಂಭಗಳನ್ನು ಆಧರಿಸಿದೆ. ಧರ್ಮದ ಪ್ರಧಾನ ಗುರಿಯು ಎರಡು ಶಕ್ತಿಗಳ ಎರಡು ಸಂಘರ್ಷದ ಗುರಿಗಳು ಮತ್ತು ಚಟುವಟಿಕೆಗಳನ್ನು ಪರಿಹರಿಸುವುದಾಗಿದೆ. ತಯಾರಕರು, ವಿತರಕರು, ಚಿಲ್ಲರೆ ವ್ಯಾಪಾರಿಗಳು, ಮಾರಾಟಗಾರರು ಇತ್ಯಾದಿಗಳನ್ನು ಒಳಗೊಂಡಿರುವ ಮಾರುಕಟ್ಟೆ ರಚನೆಯಿಂದ ಒಂದ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ ಮತ್ತು ಇನ್ನೊಂದು ವ್ಯವಸ್ಥೆಯನ್ನು ಗ್ರಾಹಕರು ಪ್ರತಿನಿಧಿಸುತ್ತಾರೆ. ಈ ಎರಡು ಪರಸ್ಪರ ವಿರುದ್ಧ ವಾದ ಶಕ್ತಿಗಳನ್ನು ಸಮನ್ವಯಗೊಳಿಸುವ ಮತ್ತು ಪರಸ್ಪರ ತೃಪ್ತಿಗಾಗಿ ಅವರ ನಡವಳಿಕೆಯ ಮಾದರಿಯನ್ನು ನಿಯಂತ್ರಿಸುವ ಪರಿಕಲ್ಪನಾ ತತ್ವವು “ಧರ್ಮ” ಆಗಿದೆ, ಇದು ಅಂತಿಮವಾಗಿ ಮೋಕ್ಷಕ್ಕೆ ಕಾರಣವಾಗುತ್ತದೆ. ಮೇಲಿನ ತತ್ವಗಳ ಆಧಾರದ ಮೇಲೆ ABGP ತನ್ನ ಕಾರ್ಯತಂತ್ರವನ್ನು ಯೋಜಿಸುತ್ತದೆ.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಏಕಮೇವ ರಾಷ್ಟೀಯ ಸಂಘಟನೆಯಾಗಿದ್ದು, ನಮ್ಮ ದೇಶದಲ್ಲಿ ಗ್ರಾಹಕರ ಹಿತ ರಕ್ಷಣೆಯ ಘನ ಉದ್ದೇಶದಿಂದ ಸ್ಥಾಪಿತವಾದ ಒಂದು ದೊಡ್ಡ ಸ್ವಯಂ ಸೇವಾ ಸಂಘಟನೆ ಎಂದು ಪರಿಚಿತವಾಗಿದೆ.
1974 ರಿಂದ ಗ್ರಾಹಕರ ನಡುವೆ ಕಾರ್ಯ ನಿರತವಾಗಿದೆ. 1986ರವರೆಗೆ ಗ್ರಾಹಕರ ಹಿತ ಸಂರಕ್ಷಣೆಗೆ ಯಾವ ಕಾಯ್ದೆಯು ಇರಲಿಲ್ಲ. ಪ್ರತಿಯೊಂದು ಸಮಸ್ಯೆಗೂ, ಪರಿಹಾರಕ್ಕೂ, ಗ್ರಾಹಕನು ಸಿವಿಲ್ ಕೋರ್ಟ್ ಗಳ ಶರಣು ಹೋಗಬೇಕಿತ್ತು. ಪ್ರತಿ ಸಮಸ್ಯೆಗೂ ಕೋರ್ಟ್ ಗಳನ್ನು, ವಕೀಲರ ಮೊರೆ ಹೋಗುವ ಪರಿಸ್ಥಿತಿಯಿತ್ತು. ನಮ್ಮ ಪ್ರಮುಖ ಕಾರ್ಯಕರ್ತರು ಈ ಜಟಿಲತೆಯನ್ನು ಮನಗಂಡು, ಸಮಾಜದ ನಡುವೆ ಗ್ರಾಹಕರಲ್ಲಿ ” ಜಾಗೃತಿ ” (Awareness)ಯನ್ನು ಮೂಡಿಸುತ್ತಾ, ಪುಣೆ, ನಾಗಪುರದಂತಹ ಪ್ರಮುಖ ಕೇಂದ್ರಗಳಲ್ಲಿ ಮಾನನೀಯ ಗುರೂಜಿಯವರ ಆಶೀರ್ವಾದದೊಂದಿಗೆ, ಮಾನನೀಯ ಶ್ರೀ ದತ್ತೋಪಂತ ತೇಂಗಡಿಯವರ ಪ್ರೇರಣೆಯಿಂದ, ಶ್ರೀ ಬಿಂದು ಮಾಧವ ಜೋಷಿಯವರು ಪುಣೆಯಲ್ಲಿ, ಶ್ರೀ ರಾಜ ಭಾವು ಪೋಫಲೇ ಇನ್ನಿತರ ಅಸಂಖ್ಯಾತ ಕಾರ್ಯಕರ್ತರು ಗ್ರಾಹಕ ಕ್ಷೇತ್ರಕ್ಕೆ ಕಾಲಿಟ್ಟು, ಒಂದು ಅಖಿಲ ಭಾರತೀಯ ಸಂಘಟನೆಗೆ ಕಾರಣೀಭೂತರಾದರು.
1974 ರಲ್ಲಿ ಈ ಆಂದೋಲನಕ್ಕೆ ಸೇರಿದ ಕೆಲವು ಸ್ವಯಂಸೇವಕರು, ಸೂರ್ಯಕಾಂತ್ ಪಾಠಕ್, ಥಾಕ್ಸೆನ್ ಪೋರೆ, ಡಾ.ಅಶೋಕ್ ಕಾಳೆ ಮುಂತಾದವರು ಇನ್ನೂ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಸಂಸ್ಥೆಯೊಂದಿಗೆ ಇದ್ದಾರೆ.
ಸಮಾಜದಲ್ಲಿ ಗ್ರಾಹಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಗ್ರಾಹಕರ ವೇದಿಕೆಯಾಗಿ, ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಗ್ರಾಹಕ ಪಂಚಾಯತ್ ಒತ್ತಾಸೆಯ ಮೇರೆಗೆ “24ನೆ ಡಿಸೆಂಬರ್ 1986” ರಲ್ಲಿ ಲೋಕಸಭೆಯಲ್ಲಿ “ಗ್ರಾಹಕ ಸಂರಕ್ಷಣ” ಕಾಯಿದೆ ಪಾರಿತವಾಯಿತು. ( 24th December, 1986, Consumer Protection Act) ಇದನ್ನು 1986 ರಲ್ಲಿ ಅಂಗೀಕರಿಸಲಾಯಿತು ಮತ್ತು ಡಿಸೆಂಬರ್ 24 ನ್ನು “ರಾಷ್ಟ್ರೀಯ ಗ್ರಾಹಕರ ದಿನ”ವೆಂದು ಘೋಷಿಸಲಾಯಿತು. ರಾಷ್ಟ್ರೀಯ ಗ್ರಾಹಕರ ದಿನವನ್ನು ಸ್ಮರಿಸುತ್ತಾ, ನಮ್ಮ ಕಾರ್ಯಕರ್ತರು ABGP ಗ್ರಾಹಕ ಜಾಗರಣ ಪಕ್ವಾಡ್ (ಪಾಕ್ಷಿಕ, ಡಿಸೆಂಬರ್ 15 ರಿಂದ ಡಿಸೆಂಬರ್ 31 ರವರೆಗೆ) 15 ದಿನಗಳ ಅವಧಿಗೆ ಅನೇಕ ಗ್ರಾಹಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆಚಾರಿಸುತ್ತೆವೆ. ಅಂದಿನಿಂದ ನಿರಂತರವಾಗಿ ಗ್ರಾಹಕರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಗ್ರಾಹಕ ಪಂಚಾಯತ್ ಹೋರಾಡುತ್ತಿದೆ. ಬಹುತೇಕ ಗೆಲುವನ್ನು ಸಾಧಿಸಿದೆ. ಇದೆಲ್ಲದರ ಹಿನ್ನಲೆಯಲ್ಲಿ ಆ. ಭಾ. ಗ್ರಾಹಕ ಪಂಚಾಯತ್ ನ ಧೃಢ ಸಂಕಲ್ಪವೇ ಕಾರಣವಾಗಿದೆ.

ಎಬಿಜಿಪಿಯ ಕರ್ನಾಟಕ ಪ್ರಾಂತವು ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ನಿಬಂಧನೆಗಳ ಬಗ್ಗೆ ಗ್ರಾಹಕರಿಗೆ ಶಿಕ್ಷಣ ನೀಡಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಗ್ರಾಹಕರ ಬೆನ್ನಿಗೆ ನಿಂತ ಗ್ರಾಹಕ ರಕ್ಷಣಾ ಕಾಯಿದೆ
ಪ್ರತಿ ವರ್ಷ ಭಾರತದಾದ್ಯಂತ ಡಿಸೆಂಬರ್ 24ರಂದು ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನ ಆಚರಿಸಲಾಗುತ್ತದೆ. 1986 ಡಿಸೆಂಬರ್ 24ರಂದು ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ದಿನ. ಉದಾರೀಕರಣ ಮತ್ತು ಜಾಗತೀಕರಣದ ಬಳಿಕ ಭಾರತ ಜಗತ್ತಿನ 2ನೇ ಅತಿದೊಡ್ಡ ಗ್ರಾಹಕರನ್ನು ಹೊಂದಿರುವ ದೇಶ. ಹಾಗಾಗಿ ಗ್ರಾಹಕರ ಅಥವಾ ಬಳಕೆದಾರರ ಶೋಷಣೆ ನಿಲ್ಲಿಸಲು ಹಾಗೂ ಅನುಚಿತ ಮತ್ತು ವ್ಯವಹಾರದಲ್ಲಿ ವಂಚಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ ಭಾರತ ಸರಕಾರ ಈ ಕಾಯ್ದೆಯನ್ನು ಜಾರಿಗೊಳಿಸಿತು.

ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ‘ಗ್ರಾಹಕ ಸಂರಕ್ಷಣಾ ಕಾಯ್ದೆ -2019’ ಯನ್ನು ಜುಲೈ 20 ರಿಂದ ಅಧಿಕೃತವಾಗಿ ಜಾರಿಗೊಳಿಸಿದೆ. ಇದರೊಡನೆ ಗ್ರಾಹಕರ ಸುರಕ್ಷತೆಗೆ ಆದ್ಯತೆ ಎಂಬ ವಾದಕ್ಕೆ ಇನ್ನಷ್ಟು ಬಲ ಲಭಿಸಿದೆ.
ಗ್ರಾಹಕ ಸಂರಕ್ಷಣಾ ಕಾಯ್ದೆ, 1986 ಅನ್ನು ಬದಲಿಸಿ ಗ್ರಾಹಕ ಸಂರಕ್ಷಣಾ ಕಾಯ್ದೆ, 2019ಗೆ ರಾಷ್ಟ್ರಪತಿ ಕೋವಿಂದ್ 2019 ಆಗಸ್ಟ್ 9ರಂದು ಅಂಕಿತ ಹಾಕಿದ್ದರು. ಅಧಿಸೂಚನೆಗಳನ್ನು ನೀಡುವ ಮೂಲಕ ಜುಲೈ 20 ರಿಂದ ಗ್ರಾಹಕ ಸಂರಕ್ಷಣಾ ಕಾಯ್ದೆ -2019 ಅನ್ನು ಜಾರಿಗೆ ತರಲಾಗಿದೆ. ಈ ಕಾನೂನು ತುಂಬಾ ಕಟ್ಟುನಿಟ್ಟಾಗಿದೆ ಮತ್ತು ಗ್ರಾಹಕರಿಗೆ ಹೆಚ್ಚಿನ ಹಕ್ಕುಗಳನ್ನು ನೀಡುತ್ತದೆ. ಹೊಸ ಕಾನೂನು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಗ್ರಾಹಕ ಸಂರಕ್ಷಣಾ ಕಾಯ್ದೆ 1986 ಅನ್ನು ಬದಲಿಸಿದೆ. ಈ ಕಾಯ್ದೆಯು ದೇಶವ್ಯಾಪಿ ಜಾರಿಗೊಳ್ಳುತ್ತಿದೆ. ಗ್ರಾಹಕರ ಹಿತದೃಷ್ಟಿಯಿಂದ 1986ರ ಗ್ರಾಹಕರ ರಕ್ಷಣಾ ಕಾಯ್ದೆಗೆ ಕೇಂದ್ರ ಸರ್ಕಾರ 2019 ಜುಲೈ ತಿಂಗಳಲ್ಲೇ ಸಂಪೂರ್ಣ ಬದಲಾವಣೆ ತಂದಿತ್ತು. ಗ್ರಾಹಕರ ರಕ್ಷಣಾ ಪ್ರಾಧಿಕಾರ 109 ಅಂಶಗಳಲ್ಲಿ ಬದಲಾವಣೆ ತಂದಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲಿದೆ, ಇ-ವಾಣಿಜ್ಯ ನೇರ ಮಾರಾಟ ಹಾಗೂ ಟೆಲಿ ಮಾರ್ಕೆಟಿಂಗ್ ಇತ್ಯಾದಿ ಪ್ರಸಕ್ತ ವ್ಯವಹಾರಗಳನ್ನು ಕೇಂದ್ರೀಕರಿಸಿ ಬದಲಾವಣೆ ತರಲಾಗಿದೆ. ಇದು ಹೊಸ ಮತ್ತು ಕ್ರಾಂತಿಕಾರಿ ಹೆಜ್ಜೆಯಾಗಿದ್ದು ಗ್ರಾಹಕರ ಹಕ್ಕುಗಳಿಗೆ ಹೆಚ್ಚಿನ ಬಲವನ್ನು ನೀಡುತ್ತದೆ.
ಗ್ರಾಹಕರಿಗೆ ಅರಿವು ಅತ್ಯಗತ್ಯ
 ಗ್ರಾಹಕ ಹಕ್ಕು, ಸುರಕ್ಷತೆ ಹಕ್ಕು
 ವ್ಯವಹಾರ ನಿಬಂಧನೆ,
 ಸರಕು ಅಥವಾ ಉತ್ಪನ್ನಗಳ ಗುಣಮಟ್ಟ , ಸರಕು ಅಥವಾ ಸೇವೆಯ ಮಾಹಿತಿ ಪಡೆದುಕೊಳ್ಳುವ ಹಕ್ಕು
 ಆಯ್ಕೆಯ ಅವಕಾಶ, ನಮಗಿಷ್ಟವಾದುದನ್ನು ಅಯ್ಕೆ ಮಾಡುವ ಹಕ್ಕು
 ಮೌಲ್ಯಕ್ಕೆ ಪ್ರತಿಯಾಗಿ ಪಡೆಯುವ ಸೇವೆಯ ಪ್ರಾಮಾಣಿಕತೆ, ಇತ್ಯಾದಿ.

ಗ್ರಾಹಕ ಹಕ್ಕುಗಳ ಬಗೆಗಿನ ಜ್ಞಾನ ಅವಶ್ಯ
ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಕುರಿತು ತಿಳಿವಳಿಕೆ ಹೊಂದಿರುವುದು ಅತ್ಯವಶ್ಯ:
 ವಂಚನೆಯ ವಿರುದ್ಧ ಹೋರಾಡಬೇಕು
 ಕಾಲಕ್ಕನುಗುಣವಾಗಿ ಕೆಲವು ತಿದ್ದುಪಡಿ
 ದೂರು ಸಲ್ಲಿಸಬಹುದು
 ಹಕ್ಕುಗಳ ಬಗ್ಗೆ ಎಲ್ಲರಿಗೂ ಅರಿವಿರಬೇಕು

 ವಂಚನೆಯ ವಿರುದ್ಧ ಹೋರಾಡಬೇಕು: ಸಮಾಜದಲ್ಲಿ ಬದುಕಬೇಕಾದರೆ ಸಂವಿಧಾನ ಒದಗಿಸಿರುವ ಎಲ್ಲಾ ಹಕ್ಕುಗಳ ಬಗೆಗಿನ ಜ್ಞಾನ ಅಗತ್ಯ. ಇಲ್ಲಿ ಮೋಸ ನಡೆಯುತ್ತಲೇ ಇರುತ್ತದೆ. ಸುಳ್ಳು ಜಾಹೀರಾತುಗಳು ನೋಡುಗರನ್ನು ಮರುಳು ಮಾಡುತ್ತಲೇ ಇರುತ್ತವೆ. ಇಂಥ ಸಮಯದಲ್ಲಿ ನಮ್ಮ ಹಕ್ಕುಗಳನ್ನು ಬಳಸಿ, ವಂಚನೆಯ ವಿರುದ್ಧ ಹೋರಾಡಬೇಕು. ಈ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕು.
 ಕಾಲಕ್ಕನುಗುಣವಾಗಿ ಕೆಲವು ತಿದ್ದುಪಡಿ: 1986ರ ಹಿಂದೆ ನಮ್ಮಲ್ಲಿ ಗ್ರಾಹಕರ ರಕ್ಷಣೆಗಾಗಿ ಯಾವ ಕಾಯ್ದೆ, ಕಾನೂನುಗಳಾಗಲಿ ಇರಲಿಲ್ಲ. 1986ರಲ್ಲಿ ಬಂದ ಗ್ರಾಹಕರ ರಕ್ಷಣಾ ಕಾಯ್ದೆ, ಗ್ರಾಹಕರಿಗೆ ಅಗತ್ಯವಿರುವ ಹಕ್ಕುಗಳನ್ನು ನೀಡಿದೆ. ಜತೆಗೆ ಕಾಲಕ್ಕನುಗುಣವಾಗಿ ಕೆಲವು ತಿದ್ದುಪಡಿಗಳಿಗೂ ಒಳಗಾಗಿದೆ. ಹೊಸ ಕಾನೂನು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಗ್ರಾಹಕ ಸಂರಕ್ಷಣಾ ಕಾಯ್ದೆ 1986 ಅನ್ನು ಬದಲಿಸಿದೆ. ಈ ಕಾಯ್ದೆಯು ದೇಶವ್ಯಾಪಿ ಜಾರಿಗೊಳ್ಳುತ್ತಿದೆ. ಸದ್ಯ ಗ್ರಾಹಕ ರಕ್ಷಣಾ ಕಾಯ್ದೆ, ಸಾರ್ವಜನಿಕರ ಪಾಲಿನ ಅತಿ ದೊಡ್ಡ ಶಕ್ತಿಯಾಗಿದೆ.
 ದೂರು ಸಲ್ಲಿಸಬಹುದು: ಗ್ರಾಹಕರು ಎಂದಾಕ್ಷಣ ಕೇವಲ ಅಂಗಡಿ ವ್ಯಾಪಾರ ನಮ್ಮ ಕಣ್ಣ ಮುಂದೆ ಬರುವುದು ಸಹಜ. ಆದರೆ ಗ್ರಾಹಕರು ಎಂಬ ಸೂಚ್ಯ ಎಲ್ಲಾ ವೃತ್ತಿಗಳಿಗೂ ಅನ್ವಯವಾಗುತ್ತದೆ. ಒಬ್ಬ ವೈದ್ಯರ ಬಳಿ ಹೋಗುವ ರೋಗಿ, ವಕೀಲರಲ್ಲಿಗೆ ತೆರಳುವ ಕಕ್ಷಿದಾರ, ಒಬ್ಬ ವಿದ್ಯಾರ್ಥಿ ಪ್ರತಿಯೊಬ್ಬರೂ ಗ್ರಾಹಕರೇ ಆಗುತ್ತಾರೆ. ಯಾವುದೇ ಸಂದರ್ಭದಲ್ಲಿ ಒಬ್ಬ ಗ್ರಾಹಕ ಮೋಸ ಹೋದಲ್ಲಿ, ಗ್ರಾಹಕರ ರಕ್ಷಣಾ ಕಾಯ್ದೆಯಡಿ ಆತ ದೂರು ಸಲ್ಲಿಸಬಹುದು ಎಂದರು.
 ಹಕ್ಕುಗಳ ಬಗ್ಗೆ ಎಲ್ಲರಿಗೂ ಅರಿವಿರಬೇಕು: ಪ್ರತಿಯೊಬ್ಬನೂ ಒಂದಲ್ಲಾ ಒಂದು ರೀತಿಯಲ್ಲಿ ಗ್ರಾಹಕನಾಗಿರುತ್ತಾನೆ. ಹೀಗಾಗಿ ತನ್ನ ಹಕ್ಕುಗಳ ಬಗ್ಗೆ ಎಲ್ಲರಿಗೂ ಅರಿವಿರಬೇಕು. ಸ್ವಸ್ಥ ಸಮಾಜವನ್ನು ನಿರ್ಮಿಸಲು ಗ್ರಾಹಕ ತನ್ನ ಹಕ್ಕುಗಳನ್ನು ಸಮರ್ಥವಾಗಿ ಬಳಸಬೇಕು.

ಗ್ರಾಹಕ ರಕ್ಷಣಾ ಕಾಯ್ದೆಯಲ್ಲಿರುವ ಮಹತ್ವದ ಬದಲಾವಣೆ ಏನು? ಗ್ರಾಹಕರಿಗೆ ಇದರಿಂದ ಆಗುವ ಲಾಭವಾದರೂ ಏನು?
ಜಿಲ್ಲಾ ಗ್ರಾಹಕರ ವೇದಿಕೆಯನ್ನು ಜಿಲ್ಲಾ ಆಯೋಗ ಎಂದು ಮರುನಾಮಕರಣ ಮಾಡಲಾಗಿದೆ. ಜಿಲ್ಲಾ ಆಯೋಗದ ತೀರ್ಪಿನ ವಿರುದ್ಧ ರಾಜ್ಯ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಬೇಕಾದಲ್ಲಿ ಜಿಲ್ಲಾ ಆಯೋಗ ಆದೇಶಿಸಿದ ಮೊತ್ತದ ಶೇ.50 ರಷ್ಟು ಮೊತ್ತವನ್ನು ಠೇವಣಿ ಇಡಬೇಕು. ಈ ಹಿಂದೆ ಈ ದೇವಣಿಯ ಗರಿಷ್ಠ ಮೊತ್ತ 25,000 ರೂಪಾಯಿ ಆಗಿತ್ತು.
ಮಸೂದೆಯು ಸರಳೀಕೃತ ವಿವಾದ ಪರಿಹಾರ ಪ್ರಕ್ರಿಯೆಯನ್ನು ಸಹ ರೂಪಿಸುತ್ತದೆ, ಮಧ್ಯಸ್ಥಿಕೆ ಮತ್ತು ಪ್ರಕರಣಗಳ ಇ-ಫೈಲಿಂಗ್‌ಗೆ ಅವಕಾಶವಿದೆ. ಗ್ರಾಹಕನು ತಾನು ವಾಸಿಸುವ ವ್ಯಾಪ್ತಿಯಲ್ಲಿ ಹತ್ತಿರದ ಆಯೋಗದಲ್ಲಿ ಪ್ರಕರಣಗಳನ್ನು ದಾಖಲಿಸಲು ಸಾಧ್ಯವಾಗುತ್ತದೆ. ಗ್ರಾಹಕರು ಎಲ್ಲಿಂದಲಾದರೂ ದೂರುಗಳನ್ನು ಸಲ್ಲಿಸಬಹುದು ಮತ್ತು ಅವರು ತಮ್ಮ ಪ್ರಕರಣಗಳನ್ನು ಪ್ರತಿನಿಧಿಸಲು ವಕೀಲರನ್ನು ನೇಮಿಸಿಕೊಳ್ಳುವ ಅಗತ್ಯವಿಲ್ಲ. ಮಧ್ಯಸ್ಥಿಕೆಗಾಗಿ, ನಿಯಮಗಳಲ್ಲಿ ಕಟ್ಟುನಿಟ್ಟಾದ ಟೈಮ್‌ಲೈನ್ ಅನ್ನು ನಿಗದಿಪಡಿಸಲಾಗಿದೆ
ಇ-ಕಾಮರ್ಸ್ ಅನ್ನು ತನ್ನ ವ್ಯಾಪ್ತಿಯಲ್ಲಿ ತರುವುದು ಸೇರಿದಂತೆ ವಿವಿಧ ನಿಬಂಧನೆಗಳನ್ನು ಪರಿಚಯಿಸುವ ಮೂಲಕ ಅದರ ವ್ಯಾಪ್ತಿಯನ್ನು ವಿಸ್ತರಿಸುವುದರೊಂದಿಗೆ, ಹೊಸ ಅಧಿಕಾರಗಳನ್ನು ಸ್ಥಾಪಿಸುವ ಮೂಲಕ ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಮತ್ತು ಬಲಪಡಿಸುವ ಉದ್ದೇಶ ಹೊಂದಿದೆ. ಅಲ್ಲದೆ ಹೊಸ ಕಾಯಿದೆ, ಉತ್ಪನ್ನ ತಯಾರಕರು, ಎಲೆಕ್ಟ್ರಾನಿಕ್ ಸೇವಾ ಪೂರೈಕೆದಾರರು, ದಾರಿತಪ್ಪಿಸುವ ಜಾಹೀರಾತುದಾರರನ್ನು ನಿಯಂತ್ರಿಸಲಿದೆ.
ಸದಸ್ಯರ ಸಂಖ್ಯೆ, ಗೌರವ ಮತ್ತು ಸಿಬ್ಬಂದಿ ಕೇಡರ್ ಸಂಖ್ಯೆಯಲ್ಲಿ ಗ್ರಾಹಕ ನ್ಯಾಯಾಲಯಗಳಲ್ಲಿ ಬದಲಾವಣೆ ಆಗಲಿದ್ದು ಈ ಕಾಯ್ದೆಯಲ್ಲಿ ಕೇಂದ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ)ಕ್ಕೆ ಅವಕಾಶ ಸಿಕ್ಕಲಿದೆ.
ಹೊಸ ಕಾಯಿದೆಯ ಮೂಲಕ, ತಯಾರಿಸಿದ ಉತ್ಪನ್ನಗಳ ಪರೀಕ್ಷೆಯನ್ನು ಖರೀದಿಸುವ ಮೊದಲು, ಖರೀದಿಸುವ ಸಮಯದಲ್ಲಿ ಅಥವಾ ನಂತರ ಅನೇಕ ಹಂತಗಳಲ್ಲಿ ಮಾಡಬಹುದು, ಮತ್ತು ಉತ್ಪನ್ನವು ಯಾವುದೇ ಮಟ್ಟದಲ್ಲಿ ದೋಷಪೂರಿತವಾಗಿದೆ ಎಂದು ಕಂಡುಬಂದಲ್ಲಿ, ಉತ್ಪನ್ನದ ಸಂಪೂರ್ಣ ಬ್ಯಾಚ್ ಅನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗುವುದು. ಗ್ರಾಹಕರ ಹಕ್ಕುಗಳನ್ನು ಉತ್ತೇಜಿಸಲು , ರಕ್ಷಿಸಲು ಮತ್ತು ಜಾರಿಗೊಳಿಸಲು ಉದ್ದೇಶಿಸಿರುವ ಸಿಸಿಪಿಎ, ಅನ್ಯಾಯದ ಹಿನ್ನೆಲೆಯ ವ್ಯಾಪಾರದಿಂದ ಉಂಟಾಗುವ ವಿವಾದದಲ್ಲಿ ಗ್ರಾಹಕರ ಹಕ್ಕುಗಳನ್ನು ಕಾಪಾಡಲು ಮಧ್ಯಸ್ಥಿಕೆ ವಹಿಸುತ್ತದೆ. ಮರುಪಡೆಯುವಿಕೆ, ಮರುಪಾವತಿ ಮತ್ತು ಉತ್ಪನ್ನಗಳ ಲಾಭವನ್ನು ಒಳಗೊಂಡಂತೆ ವಿವಿಧ ಕ್ರಿಯೆಯನ್ನು ಸಹ ಇದು ಪ್ರಾರಂಭಿಸಬಹುದು.
ಈ ಕಾಯಿದೆಯು ಸರಳೀಕೃತ ವಿವಾದ ಪರಿಹಾರ ಪ್ರಕ್ರಿಯೆಯನ್ನು ಸಹ ರೂಪಿಸುತ್ತದೆ, ಮತ್ತು ಪ್ರಕರಣಗಳ ಮಧ್ಯಸ್ಥಿಕೆ ಮತ್ತು ಇ-ಫೈಲಿಂಗ್‌ಗೆ ಅವಕಾಶವಿದೆ. ಗ್ರಾಹಕನು ತಾನು ವಾಸಿಸುವ ಪ್ರದೇಶದ ನ್ಯಾಯವ್ಯಾಪ್ತಿಯನ್ನು ಹೊಂದಿರುವ ಹತ್ತಿರದ ಆಯೋಗದಲ್ಲಿ ಪ್ರಕರಣಗಳನ್ನು ದಾಖಲಿಸಲು ಸಾಧ್ಯವಾಗುತ್ತದೆ. ಅಲ್ಲದೆ ಇದೇ ಮೊದಲ ಬಾರಿಗೆ, ಉತ್ಪನ್ನ ಹೊಣೆಗಾರಿಕೆಯನ್ನು ನಿರ್ವಹಿಸುವ ವಿಶೇಷ ಕಾನೂನು ಜಾರಿಗೊಳ್ಳಲಿದ್ದು ದೋಷಯುಕ್ತ ಉತ್ಪನ್ನ ಅಥವಾ ಸೇವೆಗಳಲ್ಲಿನ ಕೊರತೆಯಿಂದ ಉಂಟಾಗುವ ನಷ್ಟ ಅಥವಾ ಹಾನಿಯನ್ನು ಸರಿದೂಗಿಸಲು ಉತ್ಪಾದಕ ಅಥವಾ ಉತ್ಪನ್ನ ಸೇವಾ ಪೂರೈಕೆದಾರ ಅಥವಾ ಉತ್ಪನ್ನ ಮಾರಾಟಗಾರ ಈಗ ಜವಾಬ್ದಾರನಾಗಿರುತ್ತಾನೆ.
ಪ್ರಸ್ತುತ, ಗ್ರಾಹಕನಿಗೆ ನ್ಯಾಯಾಲಯ ಪ್ರವೇಶದ ಒಂದೇ ಒಂದು ಅಂಶವಿದೆ, ಅದು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆದರೆ ಸಿಸಿಪಿಎಮೂಲಕ ಹೆಚ್ಚುವರಿ ಸ್ವಿಫ್ಟ್ ಕಾರ್ಯನಿರ್ವಾಹಕ ಪರಿಹಾರಗಳನ್ನು ಕಾಯಿದೆಯಲ್ಲಿ ಪ್ರಸ್ತಾಪಿಸಲಾಗಿದೆ. ಜನರ ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಉತ್ಪನ್ನಗಳ ಕಲಬೆರಕೆಗಳನ್ನು ಪರೀಕ್ಷೆ ಹಾಗೂ ತಡೆಗಾಗಿ ಶಿಕ್ಷೆಯ ನಿಬಂಧನೆಗಳೂ ಕಾಯ್ದೆಯಲ್ಲಿದೆ. ತಯಾರಕರು ಮತ್ತು ಸೇವಾ ಪೂರೈಕೆದಾರರನ್ನು ದೋಷಯುಕ್ತ ಉತ್ಪನ್ನಗಳು ಅಥವಾ ಸೇವೆಗಳ ಕೊರತೆಗೆ ಹೊಣೆಗಾರರನ್ನಾಗಿಸಲು ಇದರಿಂದ ಸಾಧ್ಯವಾಗಲಿದೆ. ಗ್ರಾಹಕರ ಹಿತಾಸಕ್ತಿ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿ ಇ-ಕಾಮರ್ಸ್ ಮತ್ತು ನೇರ ಮಾರಾಟದ ಬಗ್ಗೆ ನಿಯಮಗಳನ್ನು ಈ ಕಾಯ್ದೆಯು ಇನ್ನಷ್ಟು ಸಶಕ್ತಗೊಳಿಸುತ್ತದೆ.
ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆ-1986 ರಲ್ಲಿ ಗ್ರಾಹಕರು ಪ್ರಕರಣ ದಾಖಲಿಸುವುದಕ್ಕೆ ಅವಕಾಶವಿರ -ಲಿಲ್ಲ. ಆದರೆ ಗ್ರಾಹಕ ಸಂರಕ್ಷಣಾ ಕಾಯ್ದೆ-2019 ರಲ್ಲಿ ಗ್ರಾಹಕರು ಪ್ರಕರಣ ದಾಖಲಿಸುವು -ದಕ್ಕೆ ಅವಕಾಶವಿದೆ.

ಗ್ರಾಹಕರಿಗೆ ಸಂಬಂಧಿಸಿದ ದೂರುಗಳ ಮೇಲೆ ತಕ್ಷಣ ಕ್ರಮಕೈಗೊಳ್ಳಲಾಗುವುದು. ಗ್ರಾಹಕರ ದಾರಿತಪ್ಪಿಸುವ ಜಾಹೀರಾತು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು. ಗ್ರಾಹಕರು ದೂರುಗಳು ಪರಿಣಾಮಕಾರಿ, ತ್ವರಿತವಾಗಿ ಇತ್ಯರ್ಥ ಮಾಢುವುದಾಗಿ ಭರವಸೆ ನೀಡಿದ್ದಾರೆ
ನೂತನ ಗ್ರಾಹಕ ಸಂರಕ್ಷಣಾ ಕಾಯ್ದೆ-2019: ಗ್ರಾಹಕರು ತಿಳಿಯಬೇಕಾದ ಮಹತ್ವದ ಬದಲಾವಣೆಗಳು :
ದೂರು-ಪರಿಹಾರ:
ದೇಶದ ಎಲ್ಲಾ ರಾಜ್ಯಗಳಲ್ಲಿ ಹಾಗೂ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಸ್ಥಾಪಿಸಿ ಗ್ರಾಹಕರನ್ನು ಸಂರಕ್ಷಿಸುವುದು. ಕೇಂದ್ರ ಸರಕಾರದ ಉದ್ದೇಶದಿಂದ ಈ ಕಾಯ್ದೆ ಅಸ್ತಿತ್ವದಲ್ಲಿದೆ. ಸರಕು, ಸೇವೆ ಬೆಲೆ, ಪರಿಹಾರ ಧನದ ಮೊತ್ತ 20 ಲಕ್ಷ ರೂ.ವರೆಗೆ ಇದ್ದಲ್ಲಿ ಜಿಲ್ಲಾ ವೇದಿಕೆಗೆ ದೂರು ಸಲ್ಲಿಸಬಹುದು.
ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆ-1986 ರಲ್ಲಿ ಗ್ರಾಹಕರು ಪ್ರಕರಣ ದಾಖಲಿಸುವುದಕ್ಕೆ ಅವಕಾಶವಿರಲಿಲ್ಲ. ಆದರೆ ಗ್ರಾಹಕ ಸಂರಕ್ಷಣಾ ಕಾಯ್ದೆ-2019 ರಲ್ಲಿ ಗ್ರಾಹಕರು ಪ್ರಕರಣ ದಾಖಲಿಸುವುದಕ್ಕೆ ಅವಕಾಶವಿದೆ.
ಗ್ರಾಹಕರಿಗೆ ಸಂಬಂಧಿಸಿದ ದೂರುಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಗ್ರಾಹಕರ ದಾರಿತಪ್ಪಿಸುವ ಜಾಹೀರಾತು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು. ಗ್ರಾಹಕರು ದೂರುಗಳು ಪರಿಣಾಮಕಾರಿ, ತ್ವರಿತವಾಗಿ ಇತ್ಯರ್ಥ ಮಾಢುವುದಾಗಿ ಭರವಸೆ ನೀಡಿದ್ದಾರೆ
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ
ಗ್ರಾಹಕ ಸಂರಕ್ಷಣಾ ಕಾಯ್ದೆ-2019 ರಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯನ್ನು “ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ” ಎಂದು ತಿದ್ದುಪಡಿ ಮಾಡಲಾಗಿದೆ. ಗ್ರಾಹಕರು ಇನ್ನು ಮುಂದೆ ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಕಲಂ 35ರಡಿ ದೂರು ಸಲ್ಲಿಸಬೇಕಾಗುತ್ತದೆ. ಗ್ರಾಹಕರು ಎಲ್ಲಿ ವಾಸವಿರುವರೋ ಅಥವಾ ಆಯಾ ಜಿಲ್ಲೆಯ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ಸಲ್ಲಿಸಲು ಹೊಸ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಗ್ರಾಹಕರ ತಮ್ಮ ವಾಸದ ಜಿಲ್ಲಾ ವ್ಯಾಪ್ತಿಯಲ್ಲೆ ದೂರನ್ನು ಸಲ್ಲಿಸಲು ಅನುಕೂಲವಾಗಿದೆ.
ಗ್ರಾಹಕರು ಕೋರುವ ನಷ್ಟ ಪರಿಹಾರದ ಮಿತಿ ಇಪ್ಪತ್ತು ಲಕ್ಷದಿಂದ ಒಂದು ಕೋಟಿ ರೂ.ಗೆ ಏರಿಕೆಯಾಗಿದ್ದು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಒಂದು ಕೋಟಿ ರೂ. ವರೆಗಿನ ಮೊತ್ತಕ್ಕೆ ಸಂಬಂಧಿಸಿದ ದೂರು ದಾಖಲಿಸಬಹುದಾಗಿದೆ. ದೂರು ಶುಲ್ಕವನ್ನು ಡಿ.ಡಿ. ರೂಪದಲ್ಲಿ ಅಧ್ಯಕ್ಷರು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಡಿ.ಡಿ.ಯನ್ನು ಪಡೆದು ದೂರಿನೊಂದಿಗೆ ಲಗತ್ತಿಸಿ ಸಲ್ಲಿಸಬೇಕಾಗಿದೆ.
ಸರಕು ಮತ್ತು ಸೇವೆ
ಸರಕು ಮತ್ತು ಸೇವೆಗೆ ಸಂಬಂಧಪಟ್ಟಂತೆ ಕೋರಿರುವ ಪರಿಹಾರದ ಮಿತಿ 5 ಲಕ್ಷ ರೂ ವರೆಗಿನ ಮೊತ್ತಕ್ಕೆ ದೂರು ಶುಲ್ಕ ಇರುವುದಿಲ್ಲ. 5 ಲಕ್ಷದಿಂದ 10 ಲಕ್ಷ ರೂ ವರೆಗೆ 200 ರೂ, 10 ಲಕ್ಷದಿಂದ 20 ಲಕ್ಷ ರೂವರೆಗೆ 400 ರೂ, 20 ಲಕ್ಷದಿಂದ 50 ಲಕ್ಷದವರೆಗೆ 1000 ದರ ಶುಲ್ಕ ಹಾಗೂ 50 ಲಕ್ಷದಿಂದ 1 ಕೋಟಿ ರೂ ವರೆಗೆ 2000 ದರ ಶುಲ್ಕ ನಿಗದಿಪಡಿಸಲಾಗಿದೆ. 1986ರ ಗ್ರಾಹಕ ಸಂರಕ್ಷಣಾ ಕಾಯ್ದೆಯಲ್ಲಿ ವೇದಿಕೆಯ ಅಂತಿಮ ಆದೇಶದ ವಿರುದ್ಧ ತೀರ್ಪು ಪುನರ್ ಪರಿಶೀಲನೆಗೆ ಅವಕಾಶವಿರಲಿಲ್ಲ. ಆದರೆ ಹೊಸ ಕಾಯ್ದೆಯಲ್ಲಿ ಜಿಲ್ಲೆಯ ಗ್ರಾಹಕ ಆಯೋಗದಲ್ಲಿ ರಿವ್ಯೂ ಪಿಟಿಷನ್ ಹಾಕಲು ಅವಕಾಶ ಕಲ್ಪಿಸಿ ಅನುಕೂಲ ಮಾಡಿಕೊಡಲಾಗಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆ-2019 ತಿದ್ದುಪಡಿಯಾಗಿರುವುದನ್ನು ಸಾರ್ವಜನಿಕರು ಮತ್ತು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಕೋರಿದೆ.
ವ್ಯಾಜ್ಯ ಕಾರಣದ ಎರಡು ವರ್ಷಗಳ ಕಾಲಮಿತಿಯಲ್ಲಿ ದೂರು ಸಲ್ಲಿಸುವ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಜೊತೆಗೆ ಉತ್ಪಾದಕರ ಬಾದ್ಯತೆಯನ್ನು (ಪ್ರೊಡಕ್ಷನ್ ಲಿಅಬಿಲಿಟಿ) ಅಂದರೆ ಖರೀದಿಸಿದ ಸರಕಿನಿಂದ ಉಂಟಾದ ಜೀವಹಾನಿ ಅಥವಾ ಆಸ್ತಿ ಹಾನಿ ಉಂಟಾದಲ್ಲಿ ಸರಕಿನ ಉತ್ಪಾದಕರೆ ಪರಿಹಾರವನ್ನು ನೀಡಲು ಬಾದ್ಯಸ್ಥರಾಗಿರುತ್ತಾರೆ.
ಒಂದು ವೇಳೆ ಜಿಲ್ಲಾ ಗ್ರಾಹಕರ ಆಯೋಗದ ಆದೇಶವನ್ನು ಪಾಲಿಸದಿದ್ದಲ್ಲಿ, ದಿವಾಣಿ ನ್ಯಾಯಾಲಯದ ನಿಯಮದಂತೆ ವಸೂಲಾತಿ ಕ್ರಮ ಹಾಗೂ ಕನಿಷ್ಠ ರೂ.25,000/- ಹಾಗೂ ಗರಿಷ್ಠ ಒಂದು ಲಕ್ಷ ರೂಪಾಯಿಗಳವರೆಗಿನ ದಂಡ ಅಥವಾ ಕನಿಷ್ಠ ಒಂದು ತಿಂಗಳು ಹಾಗೂ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿದಿಸಲು ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದೆ.

ಇದಲ್ಲದೆ ದೋಷಪೂರಿತ ವಸ್ತು ಅಥವಾ ಸರಕು ಸರಬರಾಜು ಮಾಡಿ ಅದರಿಂದ ಗ್ರಾಹಕರು ಗಾಯಗೊಂಡಲ್ಲಿ ಕನಿಷ್ಠ ಆರು ತಿಂಗಳು ಜೈಲು ಶಿಕ್ಷೆ ಮತ್ತು ಒಂದು ಲಕ್ಷದವರೆಗಿನ ದಂಡವನ್ನು ವಿದಿಸಬಹುದಾಗಿದೆ. ಒಂದು ವೇಳೆ ಸರಕನ್ನು ಖರೀದಿಸಿದ ಗ್ರಾಹಕರು ತೀವ್ರವಾಗಿ ಗಾಯಗೊಂಡಲ್ಲಿ ಐದು ಲಕ್ಷ ರೂಪಾಯಿ ದಂಡ ಮತ್ತು ಏಳು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಹಾಗೂ ಒಂದು ವೇಳೆ ಗ್ರಾಹಕರಿಗೆ ಪ್ರಾಣ ಹಾನಿ ಉಂಟಾದಲ್ಲಿ ಕನಿಷ್ಠ ಏಳು ವರ್ಷಕ್ಕೆ ಕಡಿಮೆ ಇಲ್ಲದಂತೆ ಅಥವಾ ಜೀವಾವಧಿ ಜೈಲು ಶಿಕ್ಷೆ ಮತ್ತು ಹತ್ತು ಲಕ್ಷ ರೂಪಾಯಿವರೆಗೆ ದಂಡವನ್ನು ವಿಧಿಸಬಹುದಾಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.