ಅಶ್ವತ್ಥನಾರಾಯಣ, ಮೈಸೂರು

ರಾಮನದೂತನು ಅಂಜನೆಪುತ್ರನು
ಶೂರಾಗ್ರಣಿಯಿವ ಹನುಮಂತ|
ನಾಮವ ಜಪಿಸಲು ತಾಮಸ ಕಳೆವನು
ಕರುಣಾಸಾಗರ ಧೀಮಂತ||

ಲಂಕಾ ದಹನವ ಮಾಡಿದ ಧೀರನು
ಪಾಪವಿನಾಶಕ ವಾಯುಸುತ|
ಶಂಕೆಯು ಇಲ್ಲದೆ ಭಕ್ತರ ಪೊರೆವನು
ಹನುಮನು ಶರಣರ ವರದಾತ||

ವಾನರ ಮುಖ್ಯನು ಕೇಸರಿ ಸುತನಿವ
ಲಂಕಿಣಿಭಂಜನ ಬಲಭೀಮ|
ಗಾನವ ಪಾಡುತ ರಾಮನ ಭಜಿಸುವ
ಸಿದ್ಧಿಯ ಸಾಧಕ ಜಿತಕಾಮ||

ಪಿಂಗಲ ನೇತ್ರನು ಭಕ್ತರ ವತ್ಸಲ
ಸಂಕಟಹರಣನು ಶಕ್ತಿಧರ|
ಮಂಗಳಮೂರ್ತಿಯು ಪಾವನನಾಗಿಹ
ಸಮೀರ ತನಯನು ಪಾಪಹರ||

ಖೇಚರನಾಗುತ ಸಾಗರ ದಾಟುವ
ರಾಮನ ಭಕ್ತನು ಕಪೀಶನು|
ಯಾಚನೆ ಮಾಡುತ ಭಕ್ತಿಯ ತೋರಲು
ಪ್ರೀತಿಯ ನೀಡುತ ಕಾಯುವನು||

Leave a Reply

Your email address will not be published.

This site uses Akismet to reduce spam. Learn how your comment data is processed.