ಬೆಂಗಳೂರು: ಅಭ್ಯುದಯ ಸಂಸ್ಥೆಯ ವತಿಯಿಂದ ಜನವರಿ 1 ರಂದು ಪೂರ್ವಾಹ್ನ 9:00ಕ್ಕೆ, ಬೆಂಗಳೂರಿನ S-VYASA ವಿಶ್ವವಿದ್ಯಾಲಯದ ಪ್ರಶಾಂತಿ ಕುಟೀರಮ್ ನಲ್ಲಿ ‘ಆರೋಹಣ – 2022’ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ S-VYASA ವಿಶ್ವವಿದ್ಯಾಲಯದ ಉಪಕುಲತಿಗಳಾದ ಡಾ.ಎಚ್.ಆರ್. ನಾಗೇಂದ್ರ ಗುರೂಜಿ, ಇಸ್ರೋದ URSCಯ ಡೆಪ್ಯುಟಿ ಡೈರೆಕ್ಟರ್ ಡಾ.ಎಸ್.ವಿ.ಶರ್ಮ, ಎನ್ಎಂಕೆಆರ್‌ವಿ ಮಹಿಳಾ ಕಾಲೇಜಿನ ಡಾಕ್ಯುಮೆಂಟರಿಸ್ಟ್ ಡಾ. ಜಿ.ಎನ್ ಸಂಗೀತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಆರೋಹಣದ ಕುರಿತು: ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಲ್ಲಿನ ಪ್ರತಿಭೆಯ ಪ್ರೋತ್ಸಾಹಕ್ಕಾಗಿ ಪ್ರತಿ ವರ್ಷ ಅಭ್ಯುದಯ ಸಂಸ್ಥೆಯಿಂದ ಆಯೋಜಿಸಲ್ಪಡುವ ವಿಶಿಷ್ಟವಾದ ಸ್ಪರ್ಧೆ ಆರೋಹಣ. ಕಳೆದ ವರ್ಷ 2000ಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು. ಸುಮಾರು 300 ಸ್ವಯಂಸೇವಕರು ಮತ್ತು ತೀರ್ಪುಗಾರರು ಈ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಕೈಜೋಡಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.