ಯುವ ದಲಿತ ಪತ್ರಕರ್ತ ತೇಜ ಅವರ ಮೇಲೆ ಫ್ರೀಡಂಪಾರ್ಕ್ ಕಾರ್ಯಕ್ರಮದಲ್ಲಿ ಅಮಾನವೀಯ ಹಲ್ಲೆ ನೆಡಸಿದ ಗೂಂಡಗಳನ್ನು ಬಂಧಿಸುವಂತೆ ಆಗ್ರಹಿಸಿ ದಲಿತ ನಾಯಕರ ನಿಯೋಗ ಗೃಹ ಸಚಿವ ಅರಗ ಜ್ಞಾನೇಂದ್ರರವರನ್ನು ಇಂದು ಭೇಟಿ ಮಾಡಿ ಚರ್ಚಿಸಿತು .

ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ , ಛಲವಾದಿ ನಾರಾಯಣಸ್ವಾಮಿ , ದಲಿತ ಮುಖಂಡರಾದ ಜಗದೀಶ್ ಯಲಹಂಕ , ವೆಂಕಟೇಶ್ , ಅಲೆಮಾರಿ ಸಮುದಾಯಗಳ ಮುಖಂಡರಾದ ಕಿರಣ್ ಕೊತ್ತಿಗೆರೆ , ಸುನೀಲ್ ಹೆಳವರ , ಲೋಹಿತಾಶ್ವ , ಅಂಜನೇಯ ಮತ್ತಿತರರು ಇದ್ದರು .

ನಿಯೋಗದ ಅಹವಾಲನ್ನು ಆಲಿಸಿದ ಸಚಿವರು ದಲಿತ ಪತ್ರಕರ್ತನ ಮೇಲೆ ಹಲ್ಲೆ ನೆಡಸಿದವರಿಗೆ ತಕ್ಕ ಪಾಠ ಕಲಿಸಲು ಸರ್ಕಾರ ಬದ್ಧವಾಗಿದೆ . ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ , ತಲೆಮರೆಸಿಕೊಂಡಿರುವ ಆರೋಪಿಗಳನ್ನು ಹಿಡಿಯಲು ಸೂಕ್ತಕ್ರಮ ಕೈಗೊಳ್ಳುವ ಭರವಸೆ ನೀಡಿದರು

Leave a Reply

Your email address will not be published.

This site uses Akismet to reduce spam. Learn how your comment data is processed.