ಕರ್ನಾಟಕ ದಕ್ಷಿಣ ವಿಶ್ವ ಹಿಂದೂ ಪರಿಷತ್‌ನ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿದ್ದ ಶ್ರೀ ಜೆ.ರಾಮಮೂರ್ತಿಯವರು ನಿಧನರಾಗಿದ್ದಾರೆ.

ವಿಶ್ವ ಹಿಂದೂ ಪರಿಷದ್ ಪರಿಷತ್ತಿನ ಜ್ಯೇಷ್ಠ ಕಾರ್ಯ ಕರ್ತರಾದ ಜ.ರಾಮ ಮೂರ್ತಿಯವರು ಕರ್ನಾಟಕ ಪ್ರಾಂತ ಸಮಿತಿ ಸದಸ್ಯರಾಗಿ ಹಾಗೂ ಚಿತ್ರದುರ್ಗದ ಹಿಂದೂ ಮಹಾಗಣಪತಿಯ ಮಾರ್ಗದರ್ಶಕರಾಗಿ, ಗೌರವ ಅಧ್ಯಕ್ಷರಾಗಿ, ವಿಶ್ವ ಹಿಂದೂ ಪರಿಷತ್ ವೀರ ಮದಕರಿ ಸೇವಾ ಟ್ರಸ್ಟ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದವರು.

ತಮ್ಮ ಕೊನೆಯ ಉಸಿರು ಇರುವವರೆಗೆ ಸಂಘಟನೆಯ, ಸಮಾಜದ,ಧರ್ಮದ ಕೆಲಸ ಮಾಡುತ್ತಾ, ಸಾಮಾನ್ಯ ಕಾರ್ಯಕರ್ತನ ಜೊತೆಯಾಗಿ ಎಲ್ಲರಿಗೂ ಮಾದರಿಯಾಗಿ, ಪ್ರೇರಣಾ ಶಕ್ತಿಯಾಗಿ ಇದ್ದಂತಹ ಹಿರಿಯರು ಶ್ರೀ ರಾಮಮೂರ್ತಿಯವರು.

ಸಂಘದ ಹಿರಿಯ ಪ್ರಚಾರಕರಾದ ಸು.ರಾಮಣ್ಣನವರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

“ಕೊನೆಯ ಉಸಿರು ಇರುವವರೆಗೆ ಸಂಘಟನೆಯ, ಸಮಾಜದ, ಧರ್ಮದ ಕೆಲಸ ಮಾಡಿ, ಸಾಮಾನ್ಯ ಕಾರ್ಯಕರ್ತನ ಜೊತೆಯಾಗಿ ಎಲ್ಲರಿಗೂ ಮಾದರಿಯಾಗಿ, ಪ್ರೇರಣಾಶಕ್ತಿಯಾಗಿ ಇದ್ದಂತಹ ಹಿರಿಯರಾದ ರಾಮಮೂರ್ತಿ ಅವರಿಗೆ ಅಂತಿಮ ನಮಸ್ಕಾರಗಳು. ಎಲ್ಲಾ ಕಾರ್ಯಕರ್ತರ ಮನಸ್ಸಿನಲ್ಲಿ, ಹೃದಯದಲ್ಲಿ ನೀವು ಅಮರರಾಗಿ ಇರುತ್ತೀರಿ.

ಶ್ರೀ ರಾಮಮೂರ್ತಿಯವರು ಸಂಘದ ಬಗ್ಗೆ ಸಂಪೂರ್ಣ ಬದ್ಧತೆಯಿದ್ದ ಸ್ವಯಂಸೇವಕರು. ವಿಶ್ವ ಹಿಂದೂ ಪರಿಷತ್ತಿನ ಕಟ್ಟಾಳು. ಚಿತ್ರದುರ್ಗದ ಹಿಂದೂ ಮಹಾ ಗಣಪತಿ ಉತ್ಸವದ ರೂವಾರಿ.”

ಸು ರಾಮಣ್ಣ ಆರೆಸ್ಸೆಸ್ ನ ಹಿರಿಯ ಪ್ರಚಾರಕರು.

Leave a Reply

Your email address will not be published.

This site uses Akismet to reduce spam. Learn how your comment data is processed.