ಬೆಂಗಳೂರು, ಮಾರ್ಚ್ 7: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನಾದಿನ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನಸುಖ್ ಮಾಂಡವೀಯ ಅವರು ಇಲ್ಲಿನ ರಾಜರಾಜೇಶ್ವರಿ ನಗರದಲ್ಲಿರುವ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನ ಸಂಸ್ಥೆಯಲ್ಲಿ (ಜೆ.ಎಂ.ಆರ್.ಎಚ್ & ಆರ್.ಸಿ) ಓಬಿಜಿ ವಿಭಾಗವನ್ನು (ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ) ಉದ್ಘಾಟಿಸಿದರು.

ಜೆ.ಎಂ.ಆರ್.ಎಚ್ & ಆರ್.ಸಿ.ಯ ಓಬಿಜಿ ವಿಭಾಗವು ಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿರುವ ಡಾ. ಲತಾ ವೆಂಕಟರಾಮ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಸಮಾಜದ ಎಲ್ಲ ವರ್ಗದವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಒದಗಿಸುವುದು ಆಸ್ಪತ್ರೆಯ ಧ್ಯೇಯವಾಗಿದೆ. ನೈತಿಕ ಹಾಗೂ ಪುರಾವೆ ಆಧಾರಿತ (ಎವಿಡೆನ್ಸ್ ಬೇಸ್ಡ್) ಕಾರ್ಯಾಚರಣೆಗೆ ಒತ್ತುಕೊಡಲಾಗುವುದು.

Leave a Reply

Your email address will not be published.

This site uses Akismet to reduce spam. Learn how your comment data is processed.