ರಾಷ್ಟ್ರೀಯ ಸ್ವಯಂಸೇವಕ ಸಂಘ – ಕರ್ನಾಟಕ

# 74, ಕೇಶವಕೃಪ, ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು – 560004

080-26610081 www.samvada.org

ಸಮಾಜ ಬಾಂಧವರಲ್ಲಿ ಒಂದು ಮನವಿ

ಸೆಪ್ಟಂಬರ್ 4, 2014 ರಂದು ಆರಂಭಗೊಂಡ ಭಾರೀ ಮಳೆಯ ಕಾರಣದಿಂದ ಉಂಟಾದ ಭೀಕರ ಪ್ರವಾಹಕ್ಕೆ ಜಮ್ಮು ಮತ್ತು ಕಾಶ್ಮೀರ ನಲುಗಿ ಹೋಗಿದೆ. ಝೀಲಂ, ತವಿ ಸೇರಿದಂತೆ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿವೆ. ರಾಜೌರಿ, ಫೂಂಛ್, ಪುಲ್ವಾಮ, ಬಾರಾಮುಲ್ಲಾ ಸೇರಿದಂತೆ ಅನೇಕ ಜಿಲ್ಲೆಗಳ ಸಾವಿರಾರು ಗ್ರಾಮಗಳು ಜಲಾವೃತಗೊಂಡಿವೆ. ರಸ್ತೆ-ಶಾಲೆ-ಆಸ್ಪತ್ರೆ-ಅಂಗಡಿ-ದೇಗುಲಗಳು ಧರಾಶಾಯಿಯಾಗಿವೆ. ಕೃಷಿ-ಭೂಮಿ ಜಾನುವಾರಗಳು ಕೊಚ್ಚಿ ಹೋಗಿವೆ. ೨೦೦ಕ್ಕೂ ಹೆಚ್ಚು ಮಂದಿ ಮೃತ ಪಟ್ಟಿದ್ದಾರೆ. ಸಹಸ್ರಾರು ಜನರು ಈ ಭೀಕರ ಪ್ರಳಯದಿಂದ ಸಂತ್ರಸ್ತರಾಗಿದ್ದಾರೆ.

ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿದೆ. ಆರೆಸ್ಸೆಸ್ ಸ್ವಯಂಸೇವಕರು ಈಗಾಗಲೇ ಪರಿಹಾರ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಸೇವಾಭಾರತಿ ಅಲ್ಲಲ್ಲಿ ಸಹಾಯಕೇಂದ್ರಗಳನ್ನು ಆರಂಭಿಸಿದೆ. ಸರಕಾರ ಮತ್ತು ಸೇನೆಗೆ ಸಹಕರಿಸುತ್ತಾ ಸಾವಿರಾರು ನೊಂದ ಜೀವಗಳಿಗೆ ಆಸರೆಯಾಗಿದ್ದಾರೆ. ಈ ಮುಂಚೆಯೇ ಪ್ರತ್ಯೇಕವಾದಿಗಳು, ಭಯೋತ್ಪಾದಕರ ಅಟ್ಟಹಾಸಕ್ಕೆ ನಲುಗಿರುವ ಜಮ್ಮು ಮತ್ತು ಕಾಶ್ಮೀರದ ಬಂಧುಗಳ ಬದುಕು ಮತ್ತೊಮ್ಮೆ ದುಸ್ತರವಾಗಿದೆ. ಅಲ್ಲಿನ ಸಂತ್ರಸ್ತರಿಗೆ ಇದೀಗ ಮಾನವೀಯ ನೆರವು ಅವಶ್ಯವಿದ್ದು ಸಮಾಜ ಬಾಂಧವರೆಲ್ಲರೂ ಅಲ್ಲಿನ ಜನರ ಬದುಕನ್ನು ಮತ್ತೆ ಕಟ್ಟಿಕೊಡುವಲ್ಲಿ ಸಹಕರಿಸಬೇಕಿದೆ. ಆರ್ಥಿಕ ಧನಸಹಾಯವನ್ನು ದೇಣಿಗೆ ರೂಪದಲ್ಲಿ ನೀಡಿ ಸಹಕರಿಸಬೇಕು ಹಾಗೂ ಜಮ್ಮು ಮತ್ತು ಕಾಶ್ಮೀರದ ಜನತೆಗೆದುರಾಗಿರುವ ಈ ಹಠಾತ್ ಸಂಕಷ್ಟವನ್ನು ನಿವಾರಿಸಲು ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಕಳಕಳಿಯ ವಿಜ್ಞಾಪನೆಗಳು.

ಆರೆಸ್ಸೆಸ್ ಸಂಚಾಲಿತ ಸಂತ್ರಸ್ತ ಪರಿಹಾರನಿಧಿ ’RSS Sanchalita Santrasta Parihara Nidhi’ ಹೆಸರಿನಲ್ಲಿ ಚೆಕ್/ಡಿ.ಡಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕೆಂದು ಕೋರುತ್ತೇವೆ.

  • ಕೇಶವ ಕೃಪಾ ಆರೆಸ್ಸೆಸ್ ಕಛೇರಿ, #74, ರಂಗರಾವ್ ರಸ್ತೆ , ಶಂಕರಪುರಂ, ಬೆಂಗಳೂರು-೫೬೦೦೦೪ ದೂರವಾಣಿ:080-26610081
  • ಕೇಶವ ಕುಂಜ ಆರೆಸ್ಸೆಸ್ ಕಛೇರಿ , ಲೋಕಮಾನ್ಯ ತಿಲಕ್ ರಸ್ತೆ, ಗೋಕುಲ ರಸ್ತೆ, ಹುಬ್ಬಳ್ಳಿ, ದೂರವಾಣಿ:0836-2232972
  • FOR ONLINE TRANSFER:   “RSS Sanchaalita Santrasta Parihaara Nidhi” SB Account Number: 0789101009327, IFSC Code: CNRB0000789 Canara Bank, Kempegouda Nagar Branch, (Near Chamarajapet Uma Theater) Bangalore-560018

ನಿಮ್ಮ ಉದಾರ ನೆರವಿನ ನಿರೀಕ್ಷೆಯಲ್ಲಿ

ಮ. ವೆಂಕಟರಾಮು                                                                                                                       ಡಾ.ಖಗೇಶನ್ ಪಟ್ಟಣಶೆಟ್ಟಿ

ಪ್ರಾಂತ ಸಂಘಚಾಲಕರು, ಕರ್ನಾಟಕ ದಕ್ಷಿಣ                                                                             ಪ್ರಾಂತ ಸಂಘಚಾಲಕರು, ಕರ್ನಾಟಕ ಉತ್ತರ

ನೀವು ಇಂಟರ್‌ನೆಟ್ ಮೂಲಕ ಅಥವಾ ಅಂಚೆ ಮೂಲಕ ಚೆಕ್/ಡಿಡಿ ಕಳುಹಿಸಿದರೆ ಆ ಕುರಿತು 9448284625, 9448847866  ಅಥವಾ karnatakarss@gmail.com  ಗೆ ಇ-ಮೈಲ್ ಮೂಲಕ ದಯವಿಟ್ಟು ತಿಳಿಸಿ.

RSS Appeal JK Flood Sept-9-2014 (1)

 

RSS appeal JKFlood Sept 9-2014

Leave a Reply

Your email address will not be published.

This site uses Akismet to reduce spam. Learn how your comment data is processed.