ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾಗಿದ್ದ ಶ್ರೀ ಹರಿಭಾವು ವಝೆ (92) ಭಾನುವಾರ ಬೆಳಿಗ್ಗೆ 10:20ಕ್ಕೆ ನಿಧನರಾಗಿದ್ದಾರೆ.

ಹರಿಭಾವು ಅವರ ನಿಧನಕ್ಕೆ ಕ್ಷೇತ್ರೀಯ ಸಂಘಚಾಲಕರಾದ ವಿ. ನಾಗರಾಜ್ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. “ಸನ್ಮಾನ್ಯ ಹರಿಭಾವು ಅವರು ದೈವಾಧೀನರಾದ ಸುದ್ಧಿ ಅತ್ಯಂತ ದುಃಖವನ್ನು ತಂದಿತು. ಎಪ್ರಿಲ್
ತಿಂಗಳಿನಲ್ಲಿ ಅವರ ದರ್ಶನ ಭಾಗ್ಯ ಬೆಳಗಾವಿಯಲ್ಲಿ ದೊರಕಿತ್ತು. ಸಂಘದ ಹಿರಿಯರ ಪರಂಪರೆಯಲ್ಲಿನ ಇನ್ನೊಂದು ಕೊಂಡಿ ಕಳಚಿತು. ಸಂಘದ ಪ್ರಚಾರಕರಾಗಿ ತಾವು ಕೆಲಸ ಮಾಡಿದ ಕ್ಷೇತ್ರದಲ್ಲಿ ಬೆಳಸಿದ
ಪರಂಪರೆ, ಪದ್ಧತಿಗಳು, ಶಾರೀರಕ್ ಮತ್ತು ಬೌದ್ಧಿಕ ವಿಭಾಗಗಳಲ್ಲಿ ಪರಿಣತಿ ಅವಿಸ್ಮರಣೀಯ. ಇತಿಹಾಸ ಸಂಕಲನ ಸಮಿತಿಗೆ, ಸರಸ್ವತೀ ನದಿ ಶೋಧನೆಗಳಿಗೆ ಜೀವ ತುಂಬಿದವರು. ಅವರಿಗೆ ನನ್ನ ಶ್ರದ್ದಾಪೂರ್ವಕ ನಮನಗಳು” ಎಂದು ಜ್ಯೇಷ್ಠ ಪ್ರಚಾರಕರ ಅಗಲಿಕೆಗೆ ನುಡಿನಮನ ಸಲ್ಲಿಸಿದ್ದಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.