ತುಮಕೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ, ಪೂರ್ವ ಪ್ರಚಾರಕ ಶ್ರೀ ಕೃಷ್ಣಮೂರ್ತಿ ಹೆಗಡೆ (62 ವರ್ಷ) ಅವರು ಮೆದುಳಿನ ಸಮಸ್ಯೆಯಿಂದಾಗಿ ಸಿದ್ದಗಂಗಾ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಪರಿಚಯ: ಕೃಷ್ಣಮೂರ್ತಿ ಹೆಗಡೆ ಅವರು ಶಿರಸಿಯ ಬನವಾಸಿಯವರು. ತಮ್ಮ ಎಂಎಸ್ಸಿ ಪದವಿಯ ನಂತರ ಸಂಘದ ಪ್ರಚಾರಕರಾಗಿ ಹೊರಟರು. ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾ ಪ್ರಚಾರಕರಾಗಿ ಕರ್ತವ್ಯ ನಿಭಾಯಿಸಿದ ನಂತರ ಕುಟುಂಬದೊಂದಿಗೆ ತುಮಕೂರಿನಲ್ಲಿ ವಾಸವಿದ್ದರು. ಕಳೆದ 25 ವರ್ಷಗಳಿಂದ ತುಮಕೂರು ವಾಸಿಯಾಗಿದ್ದು, ತುಮಕೂರು ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಗುಬ್ಬಿ ತಾಲೂಕು ಗಮನಿಸುತ್ತಿದ್ದರು. ತುಮಕೂರು ಜಿಲ್ಲೆಯಲ್ಲಿ ಪತ್ರಿಕಾ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮೃತರ ಅಂತಿಮ ಸಂಸ್ಕಾರ ಶಿರಸಿಯಲ್ಲಿ ನಡೆಯಲಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.