ಆರೆಸ್ಸೆಸ್ ನ ಎರಡು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆ ಇಂದು ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಆರೆಸ್ಸೆಸ್ ನ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್, ಸರಕಾರ್ಯವಾಹರಾದ ಸುರೇಶ್ ಭಯ್ಯಾಜಿ ಜೋಶಿ ಭಾರತಮಾತೆಯ ಫೋಟೋಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆಗೆ ಚಾಲನೆ ನೀಡಿದರು.


ಆರೆಸ್ಸೆಸ್ ನ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಭಾರತಮಾತೆಯ ಫೋಟೋಕ್ಕೆ ಪುಷ್ಪಾರ್ಚನೆ ಮಾಡಿದರು
ಆರೆಸ್ಸೆಸ್ ನ ಸರಕಾರ್ಯವಾಹರಾದ ಸುರೇಶ್ ಭಯ್ಯಾಜಿ ಜೋಶಿ ಭಾರತಮಾತೆಯ ಫೋಟೋಕ್ಕೆ ಪುಷ್ಪಾರ್ಚನೆ ಮಾಡಿದರು

ಕಳೆದ ಬಾರಿಯ ಎಬಿಪಿಎಸ್ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ನಡೆಯಲಿಲ್ಲ. ಕಸಾಮಾನ್ಯವಾಗಿ ಎಬಿಪಿಎಸ್ ನಲ್ಲಿ 1,500 ಪ್ರತಿನಿಧಿಗಳು ಪ್ರತಿ ವರ್ಷ ಭಾಗವಹಿಸುತ್ತಾರೆ. ಆದರೆ ಈ ವರ್ಷ 450 ಜನರು ಮಾತ್ರ ಇರುತ್ತಾರೆ. ಪ್ರತಿಬಾರಿಯಂತೆ ಮೂರು ದಿನಗಳ ಬದಲಾಗಿ ಈ ಬಾರಿಯ ಅಧಿವೇಶನ ಎರಡು ದಿನಗಳ ಕಾಲ ಮಾತ್ರ ನಡೆಯುತ್ತದೆ. ಅಲ್ಲದೆ, ಈ ಬಾರಿಯ ಅಧಿವೇಶನದಲ್ಲಿ ಆನ್ಲೈನ್ ಮೂಲಕವೂ ಪ್ರತಿನಿಧಿಗಳು ಸೇರುತ್ತಾರೆ ಎಂದು ತಿಳಿಸಲಾಗಿದೆ.

#RSSABPS2021 #RSSABPS

Leave a Reply

Your email address will not be published.

This site uses Akismet to reduce spam. Learn how your comment data is processed.