ಬೆಂಗಳೂರು: ಫೆಬ್ರವರಿ 22, 2024: ಮೌಲ್ಯಾಧಾರಿತ ಶಿಕ್ಷಣವನ್ನು ನೀಡಲು ಮತ್ತು ಯುವಕರಲ್ಲಿ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸಲು ಬದ್ಧವಾಗಿರುವ ದಿಶಾ ಭಾರತ್ ಸಂಸ್ಥೆ, 20ನೇ ವರ್ಷಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಫೆಬ್ರವರಿ 24, 2024 ರಂದು RV Teachers College Auditorium ನಲ್ಲಿ ನಡೆಯಲಿರುವ “ಸಂಭ್ರಮ” ಎಂಬ ಭವ್ಯವಾದ ಕಾರ್ಯಕ್ರಮದೊಂದಿಗೆ ತನ್ನ ಮೈಲಿಗಲ್ಲನ್ನು ಆಚರಿಸಲು ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ದಿಶಾ ಭಾರತ್ ಸಂಸ್ಥಾಪಕಿ ರೇಖಾ ರಾಮಚಂದ್ರನ್, ಸಂಯೋಜಕಿಯರಾದ ಸ್ನೇಹಾ ದಾಮ್ಲೆ, ಸ್ಮೃತಿ ಖರೆ, ಲಾವಣ್ಯ ಮಾತನಾಡಿದರು.

ಪತ್ರಿಕಾಗೋಷ್ಠಿಯ ಸಾರಾಂಶ

ಕಳೆದ ಎರಡು ದಶಕಗಳಿಂದ, ದಿಶಾ ಭಾರತ್ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು, ನಾಯಕತ್ವ ಗುಣಗಳು ಮತ್ತು ಜೀವನ ಕೌಶಲ್ಯ, ಸಮಾಜಕ್ಕೆ ಧನಾತ್ಮಕವಾಗಿ ಕೊಡುಗೆ ನೀಡುವ ಜವಾಬ್ದಾರಿಯುತ ನಾಗರಿಕರನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಈ ದಿಕ್ಕಿನಲ್ಲಿ ಸಂಸ್ಥೆಯ 19 ವರ್ಷಗಳ ಪಯಣ ತುಂಬಿರುವುದು ಒಂದು ಮಹತ್ವದ ಮೈಲಿಗಲ್ಲಾಗಿದೆ.

ಈ ವಿಶೇಷ ಸಂದರ್ಭದಲ್ಲಿ ವರ್ಷಪೂರ್ತಿ ವಿವಿ‍ಧ ಕಾರ್ಯಕ್ರಮಗಳು ನಡೆಯಲಿದ್ದು ಅವುಗಳ ಉದ್ಘಾಟನಾ ಕಾರ್ಯಕ್ರಮ ‘ಸಂಭ್ರಮ’ ಫೆ. 24, 2024 ಶನಿವಾರ ಬೆಂಗಳೂರಿನ ಜಯನಗರ 2ನೇ ಬ್ಲಾಕ್ ನಲ್ಲಿರುವ ಆರ್ ವಿ ಟೀಚರ್ಸ್ ಕಾಲೇಜಿನಲ್ಲಿ ಸಂಜೆ 4:00 ಗಂಟೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಮುಖ್ಯಸ್ಥ ಪ್ರೊ. ಎಂ. ಜಗದೀಶ್ ಕುಮಾರ್, ಆ್ಯಕ್ಟ್ ಸಂಸ್ಥೆಯ ಮುಖ್ಯಸ್ಥ ಡಾ. ಗುರುರಾಜ ಕರಜಗಿ, ಬೆಂಗಳೂರಿನ ಐಐಎಂನ ಪ್ರೊ. ಮಹಾದೇವನ್ ಆಗಮಿಸಲಿದ್ದಾರೆ.

20ನೇ ವರ್ಷದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆ

ಭಾರತೀಯ ಇತಿಹಾಸಗಳಿಂದ ನೈತಿಕತೆ ಮತ್ತು ಜೀವನಾದರ್ಶಗಳು ವಿಷಯವಾಗಿ ಮಾಸಿಕ ಉಪನ್ಯಾಸ ಮಾಲಿಕೆ, ಶಿಕ್ಷಣ ತಜ್ಞರ ವಿಚಾರಘೋಷ್ಠಿ, ಮೆಗಾ ಯುವ ಸಮಾವೇಶ, #spreadinggoodness ಚಾಲೆಂಜ್ – ಆನ್ಲೈನ್ ಅಭಿಯಾನ, ಮೌಲ್ಯ ಶಿಕ್ಷಣದ ಕುರಿತಾಗಿ ರಾಷ್ಟ್ರಮಟ್ಟದ ಶಿಕ್ಷಣ ತಜ್ಞರ ಮತ್ತು ಶಿಕ್ಷಕರ ಸಮ್ಮೇಳನ, ಎನ್ ಎಸ್ ಎಸ್ ಸಂಯೋಜಕರ ಸಮಾಗಮ, ಯುವಜನರ ಸಬಲೀಕರಣ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳ ಒಕ್ಕೂಟ ‘ಸೇವಾ ಕುಂಭ’, ಕಾರ್ಯಕರ್ತರ ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳು, ಮೇರಾ ಭಾರತ್ ಮಹಾನ್ – ರಾಜ್ಯ ಮಟ್ಟದ ರಸಪ್ರಶ್ನೆ, ಶಿಕ್ಷಕರಿಗೆ ಮತ್ತು ಪೋಷಕರಿಗೆ ಕಾರ್ಯಾಗಾರಗಳು, ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಸಮರ್ಥ ನಾಯಕತ್ವ, ಭಾರತದ ಜ್ಞಾನಧಾರೆ ಮುಂತಾದ ವಿಷಯಗಳ ಬಗ್ಗೆ ಆನ್ಲೈನ್ ಮತ್ತು ಆಫ್ ಲೈನ್ ಕೋರ್ಸ್ ಪ್ರಾರಂಭ, ಮೌಲ್ಯಾಧಾರಿತ ಶಿಕ್ಷಣ ಕಲಿಸಲು ಆಸಕ್ತ ತರಬೇತುದಾರರಿಗೆ ತರಬೇತಿ,   Train the trainer ಕಾರ್ಯಾಗಾರ, ದಿಶಾಭಾರತ್ – ರಾಜ್ಯಾದ್ಯಂತ / ರಾಷ್ಟ್ರಾದ್ಯಂತ ಘಟಕಗಳ ಪ್ರಾರಂಭ, ಯುವಜನ – ರಾಷ್ಟ್ರನಿರ್ಮಾಣದ ರೂವಾರಿಗಳು ಎಂಬ ಯುವಜನರ ಮೂಲಕವೇ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ವಿಶೇಷ ಕಾರ್ಯಕ್ರಮಗಳು ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ: : ಲಾವಣ್ಯ: 8105417265 , ಸ್ನೇಹಾ: 9611533533

Leave a Reply

Your email address will not be published.

This site uses Akismet to reduce spam. Learn how your comment data is processed.