ಬೆಂಗಳೂರು: ಸಂಸ್ಕಾರ ಭಾರತೀ, ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ವತಿಯಿಂದ ಏಪ್ರಿಲ್ 22ನೇ ತಾರೀಖು, ಶನಿವಾರ ಸಾಯಂಕಾಲ 6.00 ಗಂಟೆಗೆ ಬೆಂಗಳೂರಿನ, ಕತ್ತರಿಗುಪ್ಪೆ ಮುಖ್ಯರಸ್ತೆ, ಐಟಿಐ ಬಡಾವಣೆಯ ಶ್ರೀ ಕೃಷ್ಣ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ‘ಕೃಷ್ಣಾರ್ಜುನ’ (ಗಯ ಚರಿತ್ರೆ)ಯಕ್ಷಗಾನ ಪ್ರಸಂಗವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಶೀಕೃಷ್ಣ ಸಮೂಹ ವಿದ್ಯಾಸಂಸ್ಥೆಯ ಸಂಸ್ಥಾಪಕ ಎಂ.ರುಕ್ಮಾಂಗದ ನಾಯ್ಡು, ಸಂಸ್ಕಾರ ಭಾರತೀ ಬೆಂಗಳೂರು ಮಹಾನಗರದ ಗೌರವಾಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ, ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಅಧ್ಯಕ್ಷ ಬಾಬು ಹಿರಣ್ಣಯ್ಯ ಅವರು ಘನ ಉಪಸ್ಥಿತಿಯನ್ನು ವಹಿಸಲಿದ್ದಾರೆ.

ಹಿಮ್ಮೇಳದಲ್ಲಿ ಕೇಶವ ಹೆಗಡೆ, ಎ ಪಿ ಪಾಠಕ್, ಗಣೇಶ್ ಗಾಂವ್ಕರ್ ಸಹಕರಿಸಿದರೆ, ಮುಮ್ಮೇಳದಲ್ಲಿ ಕೆ ಜಿ ಮಂಜುನಾಥ, ಅಶೋಕ ಭಟ್ಟ, ಉದಯ ಹೆಗಡೆ, ಸದಾಶಿವ ಭಟ್ಟ, ಅಂಬರೀಶ ಭಟ್ಟ, ಪ್ರಶಾಂತ ವರ್ಧನ, ಕುಮಾರಿ ಇಳಾ ಇರಲಿದ್ದಾರೆ.

ಸಂಸ್ಕಾರ ಭಾರತೀ, ಬೆಂಗಳೂರು ದಕ್ಷಿಣ ಜಿಲ್ಲೆಯ ವತಿಯಿಂದ ಸರ್ವರಿಗೂ ಕಾರ್ಯಕ್ರಮಕ್ಕೆ ಹೃದಯಪೂರ್ವಕ ಸ್ವಾಗತ.

Leave a Reply

Your email address will not be published.

This site uses Akismet to reduce spam. Learn how your comment data is processed.