ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪೂರ್ವ ಸಂಘಟನಾ ಕಾರ್ಯದರ್ಶಿ, ವಿಶ್ವ ಸಂವಾದ ಕೇಂದ್ರದ ಸಂಸ್ಥಾಪಕರು, ಲೇಖಕರು, ಕವಿಗಳಾದ ಚಂದ್ರಶೇಖರ ಭಂಡಾರಿಗಳು (87) ಇಂದು ದೈವಾಧೀನರಾಗಿದ್ದಾರೆ. ಈ ಕುರಿತು ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ.ನಾಗರಾಜ ಅವರು ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.

“ಸದಾ ತಿಳಿನಗೆಯ, ಮೃದು ಮಾತಿನ ನಮ್ಮೆಲ್ಲರ ಪ್ರೀತಿಯ ಚಂದ್ರಶೇಖರ ಭಂಡಾರಿಗಳು ಇನ್ನಿಲ್ಲ.ಕವಿಯಾಗಿ, ಲೇಖಕರಾಗಿ, ಅನುವಾದಕರಾಗಿ, ವಾಗ್ಮಿಗಳಾಗಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದವರು. ಮಾತಿನಲ್ಲಾಗಲಿ, ಬರಹದಲ್ಲಾಗಲಿ ಸ್ಪಷ್ಟತೆ, ಖಚಿತತೆ, ನಿಖರತೆಗಳನ್ನು ಕಾಯ್ದುಕೊಂಡವರು.”

“ಇವೆಲ್ಲಕಿಂತ ಮಿಗಿಲಾಗಿ ಸಂಘದ ಶ್ರದ್ಧೆ, ಸ್ಪೂರ್ತಿ, ಭಾವನೆಗಳನ್ನು ತುಂಬಿದವರು. ಸಂಘಕಾರ್ಯದ
ಶ್ರದ್ದಾಕೇಂದ್ರವಾದ ಪ್ರಚಾರಕತನಕ್ಕೆ ಮಾದರಿಯಾದವರು. ‘ರಾಷ್ಟ ತಪಸ್ವಿ’ ಗ್ರಂಥವನ್ನು ಬರೆದು ಪಯಣಿಸಿದ ‘ಸಂಘ ತಪಸ್ವಿ’ ಅವರ ಚೇತನಕ್ಕೆ ನನ್ನ ಶ್ರದ್ಧಾಪೂರ್ವಕ ನಮನಗಳು
ಓಂ ಶಾಂತಿಃ ಶಾಂತಿಃ”

Leave a Reply

Your email address will not be published.

This site uses Akismet to reduce spam. Learn how your comment data is processed.