Sitaram Kedilaya during the interaction

Bengaluru July 23, 2017: Senior RSS Pracharak, Former Akhil Bharatiya Seva Pramukh Sri Sitarama Kedilaya shared his experiences of mega Walkthon ‘Bharat Parikrama Yatra’ in an informal meet held at Bengaluru. RSS Pranth Karyavah N Tippeswamy, other senior functionaries attended the event.

ಬೆಂಗಳೂರು: ಜುಲೈ ೨೩, ೨೦೧೭: ಭಾರತ ಪರಿಕ್ರಮ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ಸಂಘದ ಹಿರಿಯ ಪ್ರಚಾರಕ ಶ್ರೀ ಸೀತಾರಾಮ ಕೆದಿಲಾಯರ ಜೊತೆಗೆ ‘ಅನೌಪಚಾರಿಕ ಮಾತುಕತೆ’ ಕಾರ್ಯಕ್ರಮವು ಆರೆಸ್ಸೆಸ್ ಕೇಂದ್ರಕಚೇರಿ ಕೇಶವಕೃಪಾದಲ್ಲಿ ನಡೆಯಿತು. ಕಾಲ್ನಡಿಗೆಯ ಮೂಲಕ ಭಾರತ ಸಂಚರಿಸಿದ ಸೀತಾರಾಮ ಕೆದಿಲಾಯರು ತಮ್ಮ ವಿಶೇಷ ಅನುಭವಗಳನ್ನು ಹಂಚಿಕೊಂಡರು. ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ನಾ ತಿಪ್ಪೇಸ್ವಾಮಿ, ಇತರ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
Sitaram Kedilaya during the interaction

Senior RSS Pracharak Sitaram Kedilaya returned recently after the successful Bharat Parikrama Yatra. Having started on auspicious Krishna Ashtami day of 9 Aug 2012, spanned for four years and eleven months – 1795 days travelling 27,000 kilometres by walk. It ended on the day of Gurupurnima recently. He has done a perfect Bharata Darshana in his walkathon.

The idea of such a yatra was to introduce and disemminate ‘Grama Vikasa’ and to show the strength the villages had. In his effort he has had conversations with over 9000 families, visited close to 1500 schools, interaction with aroug 5 lakh students. Each day ended with a Grama Sabha which totalled over 5lakh attendees. He has interated with over 10,000 youth. Every village he visited had tree planting and also the benefits of planting trees and conserving ecology was spoken about . The prime discussion in the whole journey of his was how villages are sustainable, and for the ‘Grama Vikasa’ to be successful what should the women, families, youth, students should be contributing and how the sustainability would result in Bharath turning out to be a VishwaGuru.

The best part was that there has been no opposition at all in any village he has been to. He also had stayed at a Naxal dominated home in West Bengal. A Communist leader joined Sitaram Kedilaya’s walkathon and walked for 10,000 kms. He also narrated as to how clean in general all villages of Assam were.

ವರದಿ:
ಭಾರತ ಪರಿಕ್ರಮ ಯಾತ್ರೆ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಮಾನ್ಯ ಶ್ರೀ ಸೀತಾರಾಮ ಕೆದಿಲಾಯರೊಂದಿಗೆ ಇಂದು ಸಂಜೆ ಸಂವಾದ ಕಾರ್ಯಕ್ರಮ ನಡೆಯಿತು.
2012 ಆಗಸ್ಟ್ 9 ರಂದು ಭಾರತದ ತುತ್ತ ತುದಿ ಕನ್ಯಾಕುಮಾರಿಯಿಂದ ಪ್ರಾರಂಭವಾದ ಈ ಪರಿಕ್ರಮ ಯಾತ್ರೆ 4 ವರ್ಷ 11 ತಿಂಗಳ ಅವಧಿಯಲ್ಲಿ 1,795 ದಿನಗಳಲ್ಲಿ ಇಡೀ ದೇಶದಲ್ಲಿ 27,000 ಕಿ.ಮೀ ದಾರಿಯನ್ನು ಕ್ರಮಿಸಿ 2017 ಜುಲೈ 9 ರಂದು ಮತ್ತೆ ಕನ್ಯಾಕುಮಾರಿಯಲ್ಲಿಯೇ ಸಂಪನ್ನಗೊಂಡಿತು. 4 ವರ್ಷ 11 ತಿಂಗಳ ಸತತ ನಡುಗೆ.‌ ಅದೆಷ್ಟು ಗ್ರಾಮಗಳ ಮೂಲಕ ಅದೆಷ್ಟೋ ಜನರ ಸಂಪರ್ಕ. ಪ್ರಾಯಶಃ ನಿಜವಾದ ಭಾರತ ದರ್ಶನ ಮಾಡಿದ್ದಾರೆ ಕೆದಿಲಾಯರು.‌

ಈ ಪರಿಕ್ರಮದ ಉದ್ದೇಶ “ಗ್ರಾಮ ವಿಕಾಸ” ದ ಪರಿಚಯ, ಪ್ರಸಾರ. ಈ ಅವಧಿಯಲ್ಲಿ ಸುಮಾರು 9000 ಕುಟುಂಬಗಳ ಜೊತೆ ಮಾತು-ಕಥೆ, ೧೫೦೦ ಶಾಲೆಗಳಿಗೆ ಭೇಟಿ ಕೊಟ್ಟು ೫ ಲಕ್ಷ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದಾರೆ ಕೆದಿಲಾಯರು. ಪ್ರತಿನಿತ್ಯ ನಡೆದ ಗ್ರಾಮಸಭೆಗಳಲ್ಲಿ ಒಟ್ಟು ಸುಮಾರು 5,00,000 ಗ್ರಾಮಸ್ಥರು ಪಾಲ್ಗೊಂಡಿದ್ದಾರೆ. ರಸ್ತೆ ಸಭೆಗಳು 10,000. ಅದರಲ್ಲಿ ಭಾಗಿಯಾದವರು 5 ಲಕ್ಷ.
ಯುವಕರೊಂದಿಗೆ ನಡೆದ ಸಭೆಗಳು 1,000. ಪಾಲ್ಗೊಂಡ ಯುವಕರ ಸಂಖ್ಯೆ 20,000 ಕ್ಕೂ ಹೆಚ್ಚು. ಪ್ರತಿ ಹಳ್ಳಿಯಲ್ಲೂ ವೃಕ್ಷಾರೋಪಣ ನಡೆದಿದೆ. ಗಿಡ ನೆಡುವುದು, ಮರಗಳ ಮಹತ್ವವನ್ನು ತಿಳಿಸುವುದು ಅದರ ವ್ಯಾಪ್ತಿಯಲ್ಲಿ ಬಂದಿದೆ.

ಈ ಎಲ್ಲಾ ಸಭೆ-ಸಂವಾದ- ಮಾತುಕಥೆ ಗಳಲ್ಲಿ ಒಂದೇ ವಿಚಾರ : ” ಗ್ರಾಮದ ವಿಕಾಸಕ್ಕೆ, ಗ್ರಾಮದ ಬೆಳವಣಿಗೆಗೆ ಆ ಗ್ರಾಮದ ಕುಟುಂಬಗಳು, ಯುವಕರು, ಮಹಿಳೆಯರು, ವಿದ್ಯಾರ್ಥಿಗಳು ಯಾವ ರೀತಿ ಯೋಗದಾನ ನೀಡಬಹುದು” ಎಂದು.‌ ಗ್ರಾಮಗಳ ಬಾಲಕರಿಗೆ, ಕಿಶೋರರಿಗೆ, ಮಾತೆಯರಿಗೆ (ಮಹಿಳೆಯರಿಗೆ) ಸರಿಯಾದ ದಾರಿಯಲ್ಲಿ, ಸರಿಯಾದ ಚಿಂತನೆ ಬಿತ್ತಿದರೆ, ನಾಳಿನ ಭಾರತದ ಚಿತ್ರಣ ಅತ್ಯುತ್ತಮವಾಗುತ್ತದೆ ಎಂಬ ಅಭಿಪ್ರಾಯ ಅವರದ್ದು.‌

ಈ ಸುದೀರ್ಘ ಪಾದಯಾತ್ರೆಯಲ್ಲಿ ಎಲ್ಲಿಯೂ, ಯಾರಿಂದಲೂ ವಿರೋಧ-ಅಡ್ಡಿ ಎದುರಾಗಲಿಲ್ಲ ಎಂಬುದು ವಿಶೇಷ. ಅಲ್ಲದೇ ಯೋಜನೆಯಂತೆಯೇ ಯಾತ್ರೆ ನಡೆದಿದೆ. ಕೆದಿಲಾಯರವರ ಆರೋಗ್ಯ ಒಂದು ದಿನವೂ ಕೆಡಲಿಲ್ಲ, ವೈದ್ಯರ ಬಳಿ ಹೋಗುವ ಅಗತ್ಯ ಬರಲಿಲ್ಲ. ಎಲ್ಲಿಯೂ ಆಹಾರ-ಭಾಷೆ ಸಮಸ್ಯೆ ಆಗಲಿಲ್ಲ.

ಬಂಗಾಳದಲ್ಲಿ ನಕ್ಸಲ್ ಕುಟುಂಬದಲ್ಲಿ ವಾಸ್ತವ್ಯ ಹೂಡಿದಾಗ ಉಂಟಾದ ಅನುಭವ ಅವಿಸ್ಮರಣೀಯ ಎಂದು ಕೆದಿಲಾಯರು ನೆನಪಿಸಿಕೊಂಡರು.‌ ಬಂಗಾಲದಲ್ಲಿಯೇ ಕಮ್ಯುನಿಸ್ಟ್ ಪಕ್ಷದ ಧುರೀಣರೊಬ್ಬರು ಇವರೊಂದಿಗೆ ಸುಮಾರು ೧೦ ಕಿ.ಮೀ ನಡೆದದ್ದೂ ಉಂಟು. ಅಸ್ಸಾಂ ರಾಜ್ಯದ ಪ್ರತಿ ಗ್ರಾಮಗಳು ಎಷ್ಟು ಸ್ವಚ್ಛವಾಗಿದ್ದವು ಎಂಬುದನ್ನೂ ಅವರು ವಿವರಿಸಿದರು.‌

ವಿವೇಕಾನಂದರ ಒಂದು ವಿಚಾರವನ್ನು ಕೆದಿಲಾಯರು ಉಲ್ಲೇಖಿಸಿದರು. ” ಇಡೀ ದೇಶದ ಸಂಪತ್ತನ್ನು ಒಂದು ಗ್ರಾಮದಲ್ಲಿ ಸುರಿದರೂ, ಆ ಹಳ್ಳಿಯ ಜನರ ಮನ ಪರಿವರ್ತನೆ ಆಗದಿದ್ದರೆ ಗ್ರಾಮ ವಿಕಾಸ ಕನಸ್ಸಿನ ಮಾತು”. ಶೌಚಾಲಯಗಳನ್ನು ಕಟ್ಟಿಕೊಟ್ಟರೂ ಅವುಗಳನ್ನು ಉಪಯೋಗಿಸುವ ಮನಸ್ಥಿತಿ ಬರಬೇಕು. ಇಲ್ಲದಿದ್ದರೆ ಈ ಟಾಯ್ಲೆಟ್ ಗಳು ಮನೆಯ ಸ್ಟೋರ್ ರೂಂ ಆಗಿರುವ ಉದಾಹರಣೆಗಳು ಅನೇಕ. ನೊಣ-ಜೇನು ನೊಣದ ಉದಾಹರಣೆಯನ್ನು ಸೊಗಸಾಗಿ ಕೆದಿಲಾಯರು ನಿರೂಪಿಸಿದರು. ನೊಣಕ್ಕೆ ಯಾವಾಗಲೂ ಕೊಳಕೇ ಆಕರ್ಷಣೆ. ಅದರಿಂದ ಕಾಯಿಲೆ ಹರಡುವುದೇ ಅದರ ಸ್ವಭಾವ.‌ ಅದೇ ಜೇನುನೊಣ ಹೂಗಳಿಂದ ಮಕರಂದ ಹೀರಿ ಜೇನುಗೂಡು ಕಟ್ಟುತ್ತದೆ.

ಸಂವಾದದಲ್ಲಿ ಪರಿಕ್ರಮದಲ್ಲಿ ಸೀತಾರಾಮ ಕೆದಿಲಾಯರು ಕಂಡ ಜಾತಿ-ವ್ಯವಸ್ಥೆ, ಮುಂದಿನ ೨೦ ವರ್ಷಗಳಲ್ಲಿ ನಮ್ಮ ದೇಶ ಎಲ್ಲಿಗೆ ಮುಟ್ಟಬಹುದು, ಹಳ್ಳಿಗಳು -ದೇವಾಲಯಗಳು ಹೇಳಿದ ಕಥೆಗಳು…ಇತ್ಯಾದಿ ಕುರಿತೂ ಚರ್ಚೆ ನಡೆಯಿತು. ನಿಜಕ್ಕೂ ಇಡೀ ಭಾರತ ಸುತ್ತಿ ಅನುಭವಗಳ ಗಣಿಯೇ ಆಗಿ ಬಿಟ್ಟಿರುವ ಶ್ರೀ ಸೀತಾರಾಮ ಕೆದಿಲಾಯರೊಂದಿಗಿನ ಸಂವಾದ ಕಾರ್ಯಕ್ರಮ ಎಂಥವರಿಗೂ ಚೈತನ್ಯ ನೀಡುವಂಥದ್ದಾಗಿತ್ತು.

 

Leave a Reply

Your email address will not be published.

This site uses Akismet to reduce spam. Learn how your comment data is processed.