ಹುಬ್ಬಳ್ಳಿ : ಇತ್ತೀಚೆಗೆ ನಮ್ಮನ್ನಗಲಿದ ವಿಜಾಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಸಂಘಚಾಲಕರಾದ ಖಗೇಶ್ವರನ್ ಪಟ್ಟಣಶೆಟ್ಟಿ ಅವರು ಸಂತಾಪ ಸೂಚಿಸಿದ್ದಾರೆ.

ಶ್ರದ್ಧಾಂಜಲಿ

ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಇಂದು ವೈಕುಂಠ ಏಕಾದಶಿಯಂದು ಶಿವಾಧೀನರಾದ ವಿಷಯ ತಿಳಿದು ನಮಗೆ ಹಾಗೂ ರಾಜ್ಯದ ಹಾಗೂ ದೇಶದ ಜನರಿಗೆ ತೀವ್ರ ದುಃಖವನ್ನು ಉಂಟುಮಾಡಿದೆ. ಪೂಜ್ಯ ಸ್ವಾಮಿಗಳು ತಮ್ಮ ಸರಳ ಜೀವನ ಹಾಗೂ ಅದ್ಭುತವಾದ ಉಪನ್ಯಾಸದ ಮೂಲಕ ನಾಡಿನ ಜನರ ಮನಸ್ಸಿನಲ್ಲಿ ಗೌರವದ ಸ್ಥಾನವನ್ನು ಪಡೆದಿದ್ದಾರೆ.

ಅವರ ಉಪನ್ಯಾಸದಿಂದ ಪ್ರೇರಣೆಯನ್ನು ಪಡೆದು ಅನೇಕರು ತಮ್ಮ ಜೀವನದಲ್ಲಿ ಅದ್ಭುತ ಸಾಧನೆಯನ್ನು ಮಾಡಿದ್ದಾರೆ. ಹಳ್ಳಿಯ ಕೃಷಿಕರು, ಕಾರ್ಮಿಕರನ್ನು ಒಳಗೊಂಡು ದೇಶದ ಅನೇಕ ಮೇಧಾವಿಗಳ ಜೀವನದ ಮೇಲೆ ಪೂಜ್ಯರು ಪ್ರಭಾವವನ್ನು ಬೀರಿದ್ದಾರೆ.

ಪೂಜ್ಯರು ಕೆಲವೇ ದಿನಗಳ ಹಿಂದೆ ತಮ್ಮ ದರ್ಶನಕ್ಕೆ ಬಂದಿದ್ದ ಸಂಘದ ಸರ ಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆಯವರಿಗೆ ಆಶೀರ್ವಾದ ಪೂರ್ವಕವಾಗಿ ನುಡಿದ ” ನೀವು ಸಂಘದ ಕಾರ್ಯಕರ್ತರು ಅಪಾರ ಪರಿಶ್ರಮಿಗಳು ಹಾಗೂ ಸದಾ ಉತ್ಸಾಹಿಗಳು” ಎಂಬ ಎರಡು ನುಡಿಮುತ್ತುಗಳು ಸಂಘದ ಎಲ್ಲ ಕಾರ್ಯಕರ್ತರಿಗೆ ಸದಾ ಪ್ರೇರಣಾದಾಯಿ. ಅವರ ಅಗಲುವಿಕೆ ಎಲ್ಲಾ ಆಸ್ತಿಕ ಭಕ್ತರಿಗೂ ಭರಿಸಲಾರದ ದುಃಖವನ್ನು ತಂದಿದೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಅವರ ಪವಿತ್ರಾತ್ಮಕ್ಕೆ ಭಕ್ತಿ ಪೂರ್ವಕ ಶ್ರದ್ಧಾಂಜಲಿಯನ್ನು ಸಮರ್ಪಿಸುತ್ತದೆ.

ಓಂ ಶಾಂತಿಃ ಶಾಂತಿಃ ಶಾಂತಿಃ

ಖಗೇಶನ್ ಪಟ್ಟಣಶೆಟ್ಟಿ
ಕರ್ನಾಟಕ ಉತ್ತರ ಪ್ರಾಂತ ಸಂಘಚಾಲಕ

Leave a Reply

Your email address will not be published.

This site uses Akismet to reduce spam. Learn how your comment data is processed.