ವಿಶೇಷಚೇತನ ಬಾಲಕ ಗೋಲಕದಲ್ಲಿ ಸಂಗ್ರಹಿಸಿದ ಹಣವನ್ನು ಶ್ರೀರಾಮ ಮಂದಿರ ನಿರ್ಮಾಣ ನಿಧಿಗೆ ಸಮರ್ಪಣೆ

03 ಜನವರಿ2021, ಮೈಸೂರು: ಮೈಸೂರು ಮಹಾನಗರದಲ್ಲಿ ನಡೆದ ‘ ಶ್ರೀರಾಮ ಮಂದಿರ ನಿಧಿ ಸಮರ್ಪಣ ಅಭಿಯಾನ’ ಕಾರ್ಯಾಲಯ ಉದ್ಘಾಟನ ಕಾರ್ಯಕ್ರಮದಲ್ಲಿ ಮಹದೇವಪುರ ಬಡಾವಣೆಯ ವಿಶೇಷಚೇತನ ಬಾಲಕ ಶ್ರೀನಿವಾಸ್ ತಾನು ಗೋಲಕದಲ್ಲಿ ಸಂಗ್ರಹಿಸಿದ ಹಣವನ್ನು ಶ್ರೀರಾಮ ಮಂದಿರ ನಿರ್ಮಾಣ ನಿಧಿಗೆ ಸಮರ್ಪಿಸಿದನು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಣಿ ಸದಸ್ಯರು ಮತ್ತು ಅಭಿಯಾನ ಟ್ರಸ್ಟ್ ನ ಪ್ರಾಂತ (ಕರ್ನಾಟಕ ದಕ್ಷಿಣ ಮತ್ತು ಉತ್ತರ) ಅಧ್ಯಕ್ಷರಾದ ಶ್ರೀ ಮಾ.ವೆಂಕಟರಾಮು ರವರು ನಿಧಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ರಾ.ಸ್ವ.ಸಂಘದ ಮೈಸೂರು ವಿಭಾಗ ಸಹ ಕಾರ್ಯವಾಹರಾದ ಶ್ರೀ ತಿಲಕ್ ಕುಮಾರ್, ಗೋಕುಲಂ ನಗರದ ಮಾನ್ಯ ಸಂಘಚಾಲಕರಾದ ಶ್ರೀ ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ವಿಶೇಷಚೇತನ ಬಾಲಕ ಗೋಲಕದಲ್ಲಿ ಸಂಗ್ರಹಿಸಿದ ಹಣವನ್ನು ಶ್ರೀರಾಮ ಮಂದಿರ ನಿರ್ಮಾಣ ನಿಧಿಗೆ ಸಮರ್ಪಣೆ

Leave a Reply

Your email address will not be published.

This site uses Akismet to reduce spam. Learn how your comment data is processed.