ಹಿಂದೂ ಭಯೋತ್ಪಾದನೆ ಎಂಬ ಷಡ್ಯಂತ್ರ

ಸಗಟು ಮುಸ್ಲಿಂ ಓಟ್ ಬ್ಯಾಂಕ್ ಮೇಲೆ ಕಣ್ಣಿರಿಸಿರುವ ನಮ್ಮ ದೇಶದ ಕೆಲವು ಕುಂತಂತ್ರಿ ರಾಜಕಾರಣಿಗಳು ಹಿಂದೂ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಅಪಪ್ರಚಾರ ಮಾಡಲಾರಂಭಿಸಿದ್ದಾರೆ. ಈ ಹಿಂದೆ ಕಂಚಿ ಶಂಕರಾಚಾರ್ಯ, ಬಾಬಾರಾಮ್‌ದೇವ್‌ರಂತಹ ಸಾಧು ಸಂತರಿಗೆ ಕಿರುಕುಳ ನೀಡಿದ್ದ ಹಿಂದು ವಿರೋಧಿ ಶಕ್ತಿಗಳು ಇದೀಗ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಪ್ರಮುಖರನ್ನು ಗುರಿಯಾಗಿರಿಸಿಕೊಂಡು, ಸಂಘದ ವರ್ಚಸ್ಸಿಗೆ ಕಪ್ಪು ಮಸಿ ಬಳಿಯುವ ಪ್ರಯತ್ನ ಮಾಡುತ್ತಿದೆ. ಆದರೆ ಹಿಂದೂ ಸಂಘಟನೆಗಳು ಇದನ್ನು ಪ್ರಜಾಪ್ರಭುತ್ವದ ರೀತಿಯಲ್ಲೇ ಸಮರ್ಥವಾಗಿ ಎದುರಿಸಲಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.