Bangalore: ಯಾದವ ಸೇವಾ ಪ್ರತಿಷ್ಥಾನ ಮತ್ತು ರಾಷ್ಟ್ರೋತ್ಥಾನ ರಕ್ತನಿಧಿ ಇವರ ಸಂಯುಕ್ತ ಆಶ್ರಯದಲ್ಲಿ ಪರಮ ಪೂಜನೀಯ ಶ್ರೀ ಗುರುಜಿ (ಮಾಡವ ಸದಾಶಿವ ಗೊಲ್ವಲ್ಕರ) ರವರ 106 ನೇ ಜನ್ಮ ದಿನದ ಪ್ರಯುಕ್ತ ಪ್ರತಿ ವರ್ಷದ ಹಾಗೆ ಈ ವರ್ಷವೂ ರಕ್ತದಾನ ಶಿಬಿರವನ್ನು  ವಿಜಯನಗರದ ನಚಿಕೇತ ಮನೋ ವಿಕಾಸ ಕೇಂದ್ರದಲ್ಲಿ   ಏರ್ಪಡಿಸಲಾಗಿತ್ತು.
ಈ ಶಿಬಿರದಲ್ಲಿ ಸುಮಾರು 102 ಜನ ರಕ್ತದಾನದ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.  ಶಿಭಿರದ ಉದ್ಘಾಟನೆಗೆ ಪದ್ಮಶ್ರೀ ಸಮೂಹ ಸಂಸ್ಥೆಗಳ ಮಾಲಿಕರಾದ ಶ್ರೀ ನಾರಾಯಣಪ್ಪ ರವರು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಮಹಾನಗರದ RSS ಸಂಘಚಾಲಕರಾದ  ಡಾ|| ಗ೦ಗಾದರ್  ಗೋವಿಂದರಾಜ ನಗರದ ಸಂಘಚಾಲಕರಾದ  ಸು0ದರಮೂರ್ತಿ ಮತ್ತು ವಿಜಯನಗರ ಭಾಗದ ಸಹಕಾರ್ಯವಹಾರದ ಶ್ರೀಹರಿ  ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.
ರಾಷ್ಟೀಯ ಸ್ವಯಂ ಸೇವಕ ಸಂಘದ ಎರಡನೇ ಸರಸಂಘಚಾಲಕರಾದ  ಶ್ರೀ ಗುರುಜಿಯವರ ಜನ್ಮದಿನದ ಪ್ರಯುಕ್ತ  ಗೋವಿಂದರಾಜ ನಗರದ ಕಾರ್ಯಕರ್ತರು ಕಳೆದ 6 ವರ್ಷಗಳಿಂದ ಈ ರೀತಿಯ ರಕ್ತದಾನ ಶಿಭಿರಗಳನ್ನು ನಡೆಸುತ್ತಿದ್ದಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.