ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖರಾದ ಶ್ರೀ ಸುನಿಲ್ ಅಂಬೇಕರ್ ಅವರು ರಾಜಾಸ್ಥಾನದಲ್ಲಿ ನಡೆಯುತ್ತಿರುವ ಅಖಿಲ ಭಾರತ ಮಟ್ಟದ ಸಭೆಯ ಕುರಿತು ನೀಡಿರುವ ಪತ್ರಿಕಾ ಹೇಳಿಕೆ :

ಪತ್ರಿಕಾ ಪ್ರಕಟಣೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸ್ಥರದ ‘ಪ್ರಾಂತ ಪ್ರಚಾರಕ ಸಭೆ’ಯು ಬರುವ ಜುಲೈ 7,8 ಮತ್ತು 9ರಂದು ಆಯೋಜನೆಗೊಳ್ಳುತ್ತಿದೆ.ರಾಜಾಸ್ಥಾನದ ಝುಝುನು‌ನಲ್ಲಿ ಈ ಸಭೆ ನಡೆಯಲಿದ್ದು ದೇಶದ ಎಲ್ಲ ಪ್ರಾಂತದ ಪ್ರಾಂತ ಪ್ರಚಾರಕರು ಅಪೇಕ್ಷಿತರಾಗಿರುತ್ತಾರೆ.ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಭಗವತ್,ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರನ್ನೂ ಸೇರಿದಂತೆ ಸಹ-ಸರಕಾರ್ಯವಾಹರಾದ ಡಾ.ಕೃಷ್ಣಗೋಪಾಲ್,ಡಾ.ಮನಮೋಹನ ವೈದ್ಯ,ಶ್ರೀ ಸಿ.ಆರ್.ಮುಕುಂದ,ಶ್ರೀ ಅರುಣ್ ಕುಮಾರ್ ಮತ್ತು ಎಲ್ಲ ಕಾರ್ಯವಿಭಾಗದ ಪ್ರಮುಖರು,ಸಹಪ್ರಮುಖರು ಹಾಗು ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರು, ಅಲ್ಲದೆ ವಿವಿಧ ಕ್ಷೇತ್ರದ ಕೆಲವು ಅಖಿಲ ಭಾರತೀಯ ಸ್ಥರದ ಸಂಘಟನಾ ಕಾರ್ಯದರ್ಶಿಗಳು ಈ ಸಭೆಗೆ ಅಪೇಕ್ಷಿತರು.

ಈ ಸಭೆಯು ಸಂಘಟನೆಗೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರಿತವಾಗಿದ್ದು ಸಂಘದ ಪ್ರಶಿಕ್ಷಣ ವರ್ಗ ‘ಸಂಘ ಶಿಕ್ಷಾ ವರ್ಗ’ದ ಸಮೀಕ್ಷೆ,ಮುಂದಿನ ವರ್ಷದ ಕಾರ್ಯಯೋಜನೆ,ಪ್ರವಾಸ ಯೋಜನೆಗಳು ಇತ್ಯಾದಿ ವಿಷಯಗಳ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅದರ ಜೊತೆಗೆ ಸಂಘದ ಶತಾಬ್ದಿ ವರ್ಷದ ಕಾರ್ಯವಿಸ್ತಾರ ಯೋಜನೆಯ ಕುರಿತಾಗಿಯೂ ವಿಚಾರ ವಿಮರ್ಶೆ ನಡೆಯಲಿದೆ.

ಸುನಿಲ್ ಅಂಬೇಕರ್,
ಅಖಿಲ ಭಾರತೀಯ ಪ್ರಚಾರ ಪ್ರಮುಖ್
ರಾಷ್ಟ್ರೀಯ ಸ್ವಯಂಸೇವಕ ಸಂಘ

22 ಜೂನ್ 2022

Leave a Reply

Your email address will not be published.

This site uses Akismet to reduce spam. Learn how your comment data is processed.