ಅಗಲಿದ ಹಿರಿಯ ಸ್ವಯಂಸೇವಕರು,ಶಂಕರಪುರಂ ಭಾಗದ ಸಂಘಚಾಲಕರಾಗಿದ್ದ ಶ್ರೀ ರಂಗಸ್ವಾಮಿಯವರಿಗೆ ದಕ್ಷಿಣ ಮಧ್ಯಕ್ಷೇತ್ರೀಯ ಸಂಘಚಾಲಕರಾದ ಶ್ರೀಯುತ ವಿ.ನಾಗರಾಜ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ತಮ್ಮ ಭೌತಿಕ ಶರೀರವನ್ನು ತ್ಯಜಿಸಿದ ಶ್ರೀ ರಂಗಸ್ವಾಮಿ ಅವರು ಬೆಂಗಳೂರಿನ ಹಿರಿಯ ಸ್ವಯಂಸೇವಕರು. ಶಂಕರಪುರ ಭಾಗದ ಸಕ್ರಿಯ ಸಂಘಚಾಲಕರಾಗಿದ್ದವರು.
ಸಿವಿಲ್ ಇಂಜಿನಿಯರಿಂಗ್ ನಲ್ಲಿ ಅತ್ಯಂತ ನಿಷ್ಣಾತರಾದ ಅವರನ್ನು ದೇಶದ ಮೊದಲ ಮೆಟ್ರೋ ರೈಲು (ಕೋಲ್ಕತಾ)
ನಿರ್ಮಾಣವಾಗುತಿದ್ದಾಗ ಪಶ್ಚಿಮ ಬಂಗಾಳ ಸರಕಾರ
ಸಲಹೆಗಾರ ರಾಗಿ ನೇಮಕ ಮಾಡಿಕೊಂಡಿತ್ತು.1989 ರಲ್ಲಿ ಕೊಲ್ಕತ್ತಾಗೆ ನಮ್ಮ ಕುಟುಂಬದವರೊಂದಿಗೆ ಹೋದಾಗ ಅವರ ಮನೆಯಲ್ಲೇ ನಾಲ್ಕುದಿನ ಆತಿಥ್ಯ.

ಅವರ ಮನೆಯ ಹತ್ತಿರದ ಉದ್ಯಾನವನದಲ್ಲಿನ ಶಾಖೆಯ
ಕಾರ್ಯವಾಹರಾಗಿದ್ದರು.12-15 ಜನ ಕಂಪನಿಗಳ CEOಗಳು ನಿತ್ಯಬರುತ್ತಿದ್ದರು.ಕೋಲ್ಕತಾದ ಎಲ್ಲಾ ಸಂಘ ಕಾರ್ಯದಲ್ಲಿ ಸಕ್ರಿಯವಾಗಿದ್ದವರು.

ಇಂದು ಭಗವಂತನ ಸಾನಿಧ್ಯ ದಲ್ಲಿ
ಅವರ ಚೇತನ ಸಮರ್ಪಿತವಾಗಿದೆ”

Leave a Reply

Your email address will not be published.

This site uses Akismet to reduce spam. Learn how your comment data is processed.