ಇಂದು ಪುಣ್ಯತಿಥಿ

ಶ್ಯಾಮ್‌ ಜಿ ಕೃಷ್ಣ ವರ್ಮ ಅವರು ಪ್ರಸಿದ್ಧ ಭಾರತೀಯ ಕ್ರಾಂತಿಕಾರಿ ಹೋರಾಟಗಾರರು. ವಿದೇಶದಲ್ಲಿ ಭಾರತೀಯ ಕ್ರಾಂತಿಕಾರಿಗಳಿಗೆ ನೆರವಾಗಲು ಇಂಡಿಯಾ ಹೌಸ್ ಸ್ಥಾಪಿಸಿದವರು. ಭಾರತೀಯ ದೇಶಭಕ್ತ ವಕೀಲ ಮತ್ತು ಪತ್ರಕರ್ತರಾಗಿ ನೀಡಿರುವ ಕೊಡುಗೆ ಅವಿಸ್ಮರಣೀಯ. ಸಂಸ್ಕೃತ ಮತ್ತು ಇತರೆ ಭಾಷೆಗಳಲ್ಲಿ ಪ್ರಖ್ಯಾತ ವಿದ್ವಾಂಸರೂ ಆಗಿದ್ದ ಶ್ಯಾಮಜಿ ಕೃಷ್ಣ ವರ್ಮ ಅವರ ಪುಣ್ಯತಿಥಿ ಇಂದು.

ಪರಿಚಯ
ಶ್ಯಾಮ್‌ ಜಿ ಕೃಷ್ಣ ವರ್ಮಾ ಅವರು ಅಕ್ಟೋಬರ್‌ 4, 1857 ರಂದು ಗುಜರಾತ್‌ ನ ಕಚ್‌ ನಲ್ಲಿರುವ ಮಾಂಡ್ವಿ ಎಂಬಲ್ಲಿ ಜನಿಸಿದರು. ಇವರ ತಂದೆ ಕೃಷ್ಣದಾಸ್ ಹಾಗೂ ತಾಯಿ ಭಾನುಶಾಲಿ. ಇವರ ತಂದೆ ಕಾಟನ್ ಪ್ರೆಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಶ್ಯಾಮ್‌ ಜಿ ಅವರು 11 ವರ್ಷ ವಯಸ್ಸಿದ್ದಾಗಲೇ ಅವರ ಪೋಷಕರು ನಿಧನರಾದರು. ಹೀಗಾಗಿ ಅವರು ಅಜ್ಜಿಯ ಮನೆಯಲ್ಲಿ ಬೆಳೆದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗುಜರಾತ್‌ ನ ಭುಜ್‌ ಜಿಲ್ಲೆಯ ಸ್ಥಳೀಯ ಶಾಲೆಯಲ್ಲಿ ಮುಗಿಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿ ಸಂಸ್ಕೃತವನ್ನು ಅಧ್ಯಯನ ಮಾಡಿದರು.


ಶ್ಯಾಮ್‌ ಜೀ ಕೃಷ್ಣ ವರ್ಮಾ ಅವರು ಸ್ವಾಮಿ ದಯಾನಂದ ಸರಸ್ವತಿ ಅವರ ಒಡನಾಟದಿಂದ ಮತ್ತು ಅವರ ಸುಧಾರಣಾವಾದಿ ಬೋಧನೆಗಳಿಂದ ಹೆಚ್ಚು ಪ್ರಭಾವಿತರಾಗಿದ್ದರು. ನಂತರ ವರ್ಮಾ ಅವರು ತತ್ವಶಾಸ್ತ್ರ ಮತ್ತು ಧರ್ಮದ ಬಗ್ಗೆ ಭಾಷಣ ಮಾಡಲು ಪ್ರಾರಂಭಿಸಿದರು. ಶ್ಯಾಮ್‌ ಜೀ ಕೃಷ್ಣ ವರ್ಮಾ 1879 ರಲ್ಲಿ ಇಂಗ್ಲೆಂಡ್‌ ಗೆ ತೆರಳಿದರು. 1881 ರಲ್ಲಿ ಬ್ರಿಟನ್‌ ಗೆ ಆಗಮಿಸಿ ಬರ್ಲಿನ್ ಕಾಂಗ್ರೆಸ್ ಆಫ್ ಓರಿಯಂಟಲಿಸ್ಟ್ ನಲ್ಲಿ ಭಾರತೀಯ ಪ್ರತಿನಿಧಿಯಾದರು.


ಕಾನೂನು ವೃತ್ತಿ
1885 ರಲ್ಲಿ ಶ್ಯಾಮ್‌ ಜೀ ಕೃಷ್ಣ ವರ್ಮಾ ಅವರು ಭಾರತಕ್ಕೆ ವಾಪಸ್‌ ಆದ ನಂತರ ವಕೀಲರಾಗಿ ಅಭ್ಯಾಸ ಪ್ರಾರಂಭಿಸಿದರು.ನಂತರ ಅವರನ್ನು ರತ್ಲಾಮ್‌ ರಾಜ್ಯದ ರಾಜ ದಿವಾನ್‌ ಆಗಿ ನೇಮಿಸಲಾಯಿತು. ಆದರೆ ಅನಾರೋಗ್ಯದ ಕಾರಣ ಈ ಹುದ್ದೆಯಿಂದ ನಿವೃತ್ತರಾಗುವಂತೆ ಒತ್ತಾಯಿಸಿದ್ದರು. ಶ್ಯಾಮ್ ಜಿ ಕೃಷ್ಣ ವರ್ಮಾ ಅವರ ಕ್ರಾಂತಿಕಾರಿಯ ಇಂಡಿಯನ್ ಹೋಮ್ ರೂಲ್ ಸೊಸೈಟಿ ಮತ್ತು ಇಂಡಿಯಾ ಹೌಸ್ ಸ್ಥಾಪನೆಯ ಮೂಲಕ ಪ್ರಕಟವಾಯಿತು. ಫೆಬ್ರವರಿ 18, 1905ರಂದು ಇಂಡಿಯನ್ ಹೋಮ್ ರೂಲ್ ಸೊಸೈಟಿಯನ್ನು ಸ್ಥಾಪಿಸಲಾಯಿತು. ನಂತರ ಜುಲೈ 1, 1905 ರಂದು, ಶ್ಯಾಮ್ ಜಿ ಕೃಷ್ಣ ವರ್ಮಾ ಅವರು ಶಿಕ್ಷಣಕ್ಕಾಗಿ ಇಂಗ್ಲೆಂಡ್ಗೆ ಬರುವ ಭಾರತೀಯ ವಿದ್ಯಾರ್ಥಿಗಳಿಗಾಗಿ ಇಂಡಿಯಾ ಹೌಸ್ ಎಂಬ ಹಾಸ್ಟೆಲ್ ಅನ್ನು ಸ್ಥಾಪಿಸಿದ್ದರು.


1907 ರಲ್ಲಿ ಪ್ಯಾರಿಸ್ ಗೆ ತೆರಳಿದರು. ಇಂಡಿಯನ್ ಹೋಮ್ ರೂಲ್ ಸೊಸೈಟಿಯ ಮೂಲಕ ಅವರು ವಿದೇಶದಲ್ಲಿದ್ದುಕೊಂಡೇ‌‌‌ ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಟೀಕಿಸಿದರು. ನಂತರ ಫ್ರೆಂಚ್ ಸರ್ಕಾರವು ಪ್ಯಾರಿಸ್‌ ನಲ್ಲಿ ನಡೆದ ರಾಜಕೀಯ ಕಾರ್ಯಕ್ರಮಕ್ಕೆ ಕಿಂಗ್ ಜಾರ್ಜ್ 5 ಜನರನ್ನು ಆಹ್ವಾನಿಸಿದ್ದರಿಂದ ಶ್ಯಾಮ್ ಜಿ ಕೃಷ್ಣ ವರ್ಮಾ 1914 ರಲ್ಲಿ ಜಿನೀವಾಗೆ ಅನಿವಾರ್ಯವಾಗಿ ಹೋಗಬೇಕಾಯಿತು. ಸ್ವಿಸ್ ಸರ್ಕಾರವು ಯಾವಾಗಲೂ ಬ್ರಿಟಿಷ್ ಸರ್ಕಾರದ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿತ್ತು. ಇದ್ದರಿಂದ ಶ್ಯಾಮ್ ಜಿ ಕೃಷ್ಣ ವರ್ಮಾ ಅವರಿಗೆ ಆಘಾತ ಉಂಟು ಮಾಡಿತ್ತು.

ಸ್ವಾತಂತ್ರ್ಯ ವೀರ ಸಾವರ್ಕರ್, ಮದನ್ ಲಾಲ್ ಧಿಂಗ್ರ, ಪಾಂಡುರಂಗ ಸದಾ ಶಿವ ಬಾಪಟ್, ಮೇಡಮ್ ಭಿಕಾಜಿ ಕಾಮಾ ಮೊದಲಾದ ಕ್ರಾಂತಿಕಾರಿಗಳು ಜೊತೆಯಾಗಿದ್ದುಕೊಂಡು ಹಚ್ಚಿದ ಕ್ರಾಂತಿಯ ಕಿಡಿ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಹುರುಪನ್ನು ನೀಡಿತ್ತು.

ಶ್ಯಾಮ್‌ ಜೀ ಕೃಷ್ಣ ವರ್ಮಾ ಅವರು ಅನಾರೋಗ್ಯ ಸಮಸ್ಯೆಯಿಂದ ಮಾರ್ಚ್ 30, 1930 ರಂದು ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.