ಕೇರಳದ ಕಣ್ಣೂರಿನಲ್ಲಿರುವ ಕುತ್ತುಪರಂಬದ ಪನುಂಡಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಜಿಮ್ನೇಶ್‌ನನ್ನು ಸಿಪಿಎಂ‌ನ ಗೂಂಡಾಗಳ ಗುಂಪು ಸುತ್ತುವರೆದು ಗಂಭೀರವಾಗಿ ಹಲ್ಲೆನಡೆಸಿದ್ದರು. ಆನಂತರ ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ‌.

ಸಿಪಿಎಂನ ಗೂಂಡಾ ಗುಂಪು ಜಿಮ್ನೇಶ್ ಮತ್ತು ಇತರ ಸ್ವಯಂಸೇವಕರನ್ನು ಗುರುಪೂಜಾ ಉತ್ಸವದ ನಂತರ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಸುತ್ತುವರೆದು ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಎ.ಆದರ್ಶ್, ಪಿ.ವಿ.ಜಿಷ್ಣು, ಟಿ.ಅಕ್ಷಯ್, ಕೆ.ಪಿ ಆದರ್ಶ್ ಅವರೂ ಸಹ ಗಂಭೀರವಾಗಿ ಗಾಯಗೊಂಡಿದ್ದು,ತಲಸ್ಸೆರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಮ್ನೇಶ್ ಅವರು ಆಸ್ಪತ್ರೆಗೆ ಹೊರಡುವ ದಾರಿಯಲ್ಲೆ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಾಗಿ ಕೊನೆಯುಸಿರೆಳೆದಿದ್ದಾರೆ. ತೀವ್ರವಾದ ಆಂತರಿಕ ರಕ್ತ ಸ್ರಾವವು ಸಾವಿಗೆ ಕಾರಣ ಎನ್ನಲಾಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.